ರೆಫೀಜರೇಷನ್ ಮತ್ತು ಏರ್ ಕಂಡೀಶನರ್ ಸರ್ವೀಸಿಂಗ್ ತರಬೇತಿಯ ಸಮಾರೋಪ ಸಮಾರಂಭ

ರುಡ್ ಸೆಟ್ ಸಂಸ್ಥೆ , ಬ್ರಹ್ಮಾವರದಲ್ಲಿ 30ದಿನಗಳ ಕಾಲ ನಡೆದ ರೆಫೀಜರೇಷನ್ ಮತ್ತು ಏರ್ ಕಂಡೀಶನರ್ ಸರ್ವೀಸಿಂಗ್ ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಉಡುಪಿ ಮಲ್ಪೆ ವಿಘ್ನೇಶ್ವರ ಪ್ರಿಂಟಿಂಗ್ ಪ್ರೆಸ್ ನ ಮಾಲಕರು ಯಶಸ್ವಿ ಉದ್ಯಮಿಯಾದ ಶ್ರೀ ಎಂ.ಮಹೇಶ್ ಕುಮಾರ್ ಭಾಗವಹಿಸಿದ್ದರು.

ಉದ್ಯಮ ದಲ್ಲಿ ಯಶಸ್ಸು ಕಾಣಬೇಕಾದರೆ ಸತತ ಪರಿಶ್ರಮ , ಶಿಸ್ತು ಇರುಬೇಕು. ಇದನ್ನು ರುಡ್ ಸೆಟ್ ಸಂಸ್ಥೆ ಕಲಿಸಿ ಕೊಡುತ್ತದೆ ಎಂದು ತಮ್ಮ ಉದ್ಯಮ ದಲ್ಲಿ ಬೆಳೆದು ಬಂದ ಅನುಭವವನ್ನು ಹಂಚಿಕೊಂಡರು. ಮತ್ತು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ರಾದ ಲಕ್ಷ್ಮೀಶ್ ಎ.ಜಿ ವಹಿಸಿದ್ದರು, ಕಾರ್ಯಕ್ರಮ ನಿರೂಪಿಸಿ, ಸ್ವಾಗತ ವನ್ನು ಸಂಸ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ನಡೆಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು.

 
 
 
 
 
 
 
 
 
 
 

Leave a Reply