ತೋನ್ಸೆ ಖಂಡಿಗೆ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು ಇಲ್ಲಿಗೆ ಪಾತ್ರೆ ಪರಿಕರಗಳ ಹಸ್ತಾಂತರ

ತೋನ್ಸೆ ಖಂಡಿಗೆ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು ಇಲ್ಲಿಗೆ ಈ ದಿನ ರೋಟರಿಕ್ಲಬ್ ಕಲ್ಯಾಣಪುರದ ವತಿಯಿಂದ ರೋಟರಿ ಜಿಲ್ಲಾ ಗೊತ್ತುಪಡಿಸಿದ ನಿಧಿ (ಡಿ.ಡಿ.ಎಫ್) ನಿಧಿಯಡಿ ಮಂಜೂರಾದ ಯೋಜನೆಯ ವತಿಯಿಂದ ಶಾಲಾ ಬಿಸಿಯೂಟದ ವ್ಯವಸ್ಥೆಗೆ ಬೇಕಾದಂತಹ ಗ್ಯಾಸ್ ಸ್ಟವ್ ಮಿಕ್ಸರ್ ಗ್ರೈಂಡರ್ ಮತ್ತು ಇತರ ಪಾತ್ರೆ ಪರಿಕರಗಳನ್ನು ಅಂದಾಜು ಮೊತ್ತ ರೂಪಾಯಿ 20500 ವೆಚ್ಚದಲ್ಲಿ ಹಸ್ತಾಂತರಿಸಲಾಯಿತು.

ರೋಟೇರಿಯನ್ ಶಂಭು ಶಂಕರ್ ಅಧ್ಯಕ್ಷರು ರೋಟರಿಕ್ಲಬ್ ಕಲ್ಯಾಣಪುರ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಈ ಪರಿಕರಗಳನ್ನು ಶಾಲಾ ಮುಖ್ಯೋಪಾಧ್ಯಾಯರು ರವರಿಗೆ ಹಸ್ತಾಂತರಿಸಲಾಯಿತು. ರೋಟರಿ ಜಿಲ್ಲೆ 3182 ರ ಮಾಜಿ ಜಿಲ್ಲಾ ಗವರ್ನರ್ ರೋಟೇರಿಯನ್ ರಾಜಾರಾಮ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಾಗೂ ಕ್ಲಬ್ಬಿನ ಕಾರ್ಯದರ್ಶಿ ರೋಟೇರಿಯನ್ ಪ್ರಕಾಶ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಆದ ಶ್ರೀ ರವೀಂದ್ರ ರಾವ್ ರವರು ಮಾತನಾಡಿ 125 ವರ್ಷ ಇತಿಹಾಸ ಇರುವ ಈ ಶಾಲಾ ಅಭಿವೃದ್ಧಿಗೆ ರೋಟರಿ ಕಲ್ಯಾಣಪುರವು ನೀಡುತ್ತಾ ಬಂದಿರುವ ಕೊಡುಗೆಯನ್ನು ಸ್ಮರಿಸಿದರು ಹಾಗೂ ಪ್ರಸಕ್ತ ನೀಡಿರುವ ಕೊಡುಗೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಆಗಿ ಹೇಳಿ ಕೃತಜ್ಞತೆ ಸಲ್ಲಿಸಿದರು. ಶಾಲಾ ಗೌರವ ಶಿಕ್ಷಕರು ಸಭಾ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಅರ್ಪಿಸಿದರು. ರೋಟೇರಿಯನ್ ರಾಮಕೃಷ್ಣ ಆಚಾರ್ಯ, ರೋಟೇರಿಯನ್ ಅಲೆನ್ ಲೂವಿಸ್, ರೋಟೇರಿಯನ್ ರಾಮ ಪೂಜಾರಿ ಹಾಗೂ ರೋಟೇರಿಯನ್ ಸುರೇಂದ್ರ ಅಮೀನ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply