ತೆಂಕನಿಡಿಯೂರು ಬಾಲಸಂಸ್ಕಾರ ಕೇಂದ್ರಕ್ಕೆ ರೂ. ಒಂದು ಲಕ್ಷದ ದೇಣಿಗೆ ಹಸ್ತಾಂತರ

ಪಿ.ಎನ್. ಆಚಾರ್ಯ ಅಭಿಮಾನಿ ಬಳಗದಿಂದ ತೆoಕನಿಡಿಯೂರು ಬಾಲಸಂಸ್ಕಾರ ಕೇಂದ್ರಕ್ಕೆ ರೂ. ಒಂದು ಲಕ್ಷದ ದೇಣಿಗೆ ಹಸ್ತಾಂತರ ಕಲಾವಿದ ಪಿ.ಎನ್. ಆಚಾರ್ಯರ
ಕಲಾಕೃತಿಗಳನ್ನೊಳಗೊಂಡ ಕಲಾಸಿರಿ ಗ್ರಂಥ ಮಾರಾಟದಿoದ ಸಂಗ್ರಹವಾದ ಮೊತ್ತದಲ್ಲಿ ರೂ. ಒಂದು ಲಕ್ಷದ ಚೆಕ್‌ನ್ನು ತೆಂಕನಿಡಿಯೂರು ಬಾಲಸಂಸ್ಕಾರ
ಕೇoದ್ರಕ್ಕೆ ನೀಡಲಾಯಿತು.

ಬಾಲಸಂಸ್ಕಾರ ಕೇಂದ್ರದ ಮಾತೃಸoಸ್ಥೆಯಾದ ಶ್ರೀ ಕಾಳಿಕಾಂಬಾ ಭಜನಾ ಸಂಘ
(ರಿ.)ವು ಇತ್ತೀಚೆಗೆ ಆಯೋಜಿಸಿದ “ವಿಕಾಸ -೨೦೨೩” ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಿ.ಎನ್. ಆಚಾರ್ಯ ಅಭಿಮಾನಿ ಬಳಗದ ಅಧ್ಯಕ್ಷರಾದ ಅಲೆವೂರು
ಯೋಗೀಶ ಆಚಾರ್ಯರು ಶ್ರೀ ಕಾಳಿಕಾಂಬಾ ಭಜನಾ ಸಂಘ
(ರಿ.) ಅಧ್ಯಕ್ಷರಾದ ಟಿ.ಕೃಷ್ಣ ಆಚಾರ್ಯ ಹಾಗೂ ಬಾಲಸಂಸ್ಕಾರ ಕೇಂದ್ರದ ಅಧ್ಯಕ್ಷರಾದ ಪ್ರದೀಪ ಆಚಾರ್ಯರವರಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಅಭಿಮಾನಿ ಬಳಗದ ಸದಸ್ಯರುಗಳಾದ ಕೆ. ಮುರಲಿಧರ್, ಬಿ. ಎ. ಆಚಾರ್ಯ, ರತ್ನಾವತಿ ಜೆ. ಬೈಕಾಡಿ, ಅಚ್ಚುತ್ತ ಆಚಾರ್ಯ, ಚಂದ್ರಶೇಖರ ಆಚಾರ್ಯ, ಅಪ್ಪಿ ಶಿವಯ್ಯ ಆಚಾರ್ಯ, ಪಿ.ಎನ್. ಆಚಾರ್ಯರ ಉಪಸ್ಥಿತಿಯಲ್ಲಿ ಕಲಾಸಿರಿ ಗ್ರಂಥ ಪ್ರಕಟನೆಗೆ ವಿಶೇಷ ಸಹಕರಿಸಿದ ಕೆ.ಮಹಾಬಲೇಶ್ವರ ಆಚಾರ್ಯ
ಗುಂಡಿಬೈಲು ಅವರನ್ನು ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply