ಕಾಪು : ನಾವು ಜೀವಿಸುತ್ತಿರುವ ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯಗಳೊಂದಿಗೆ ಬದುಕುವ ಕುಟುಂಬಗಳು ಮಾಯವಾಗುತ್ತಿದೆ. ಎಲ್ಲಾ ಕಡೆ ಆಡಂಬರದ, ತೊರ್ಪಡಿಕೆಯ, ಸುಖ ಸಂತೋಷಗಳು ಪ್ರದರ್ಶಿಸಲ್ಪಡುತಿದ್ದು, ಒಳಗಿಂದೊಳಗೆ ಪರಸ್ಪರ ಅಪನಂಬಿಕೆ, ಸಂಶಯಗಳು ಬೆರೆತುಹೋಗಿ ಕುಟುಂಬಗಳು ಛಿದ್ರವಾಗಿ ಹೋಗುತ್ತಿರುವುದು ಅವಾಗವಾಗ ನಮ್ಮ ಗಮನಕ್ಕೆ ಬರುತ್ತಾ ಇರುತ್ತವೆ.
ಇದರ ಪ್ರಭಾವವು ಸಮಾಜದ ಮೇಲೆ ಭೀರಿ, ಸಮಾಜವು ಅನೈತಿಕತೆ , ಅನಾಚಾರಗಳ ಬೀಡಾಗಿ ಅವನತಿಯತ್ತ ಸಾಗಲು ಮೂಲ ಕಾರಣವಾಗುತ್ತದೆ ಎಂದು ಮೊಹತರಮ ತಶ್ಕೀಲ ಖಾನಮ್ ರವರು ಹೇಳಿದರು.
ರಾಷ್ಟ್ರೀಯ ಅಭಿಯಾನ ನಡೆಯುತ್ತಿದ್ದು, ಅದರ ಅಂಗವಾಗಿ ಕಾಪುವಿನ ಕಮ್ಯುನಿಟಿ ಹಾಲ್ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಮಹಿಳಾ ವಿಭಾಗವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ಮುಂದುವರಿಯುತ್ತಾ ಅವರು , ಸುಭದ್ರ ಸಮಾಜವನ್ನು ಕಟ್ಟುವಲ್ಲಿ ಕುಟುಂಬದ ಪಾತ್ರವು ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಕುಟುಂಬ ಸಂಬಂಧಗಳನ್ನು ಸುಧಾರಿಸಬೇಕಾದುದು ಅತ್ಯಗತ್ಯವಾಗಿದೆ. ತಮ್ಮ ತಾಯಿ, ತಂದೆಯವರೊಂದಿಗೆ ಪ್ರೀತಿಯಿಂದ ವರ್ತಿಸುವುದು , ವ್ರದ್ಯಾಪ್ಯಾದಲ್ಲಿ ಅವರ ಸೇವೆಗೈಯ್ಯುದು, ಪತಿ – ಪತ್ನಿಯ ಸಂಬಂಧವು ನಿಷ್ಕಲ್ಮಶವಾಗಿ ಪ್ರೀತಿ, ವಿಶ್ವಾಸದಿಂದ ಕೂಡಿರಬೇಕಾದುದು, ಸಂಬಂಧಿಕರ ಹಕ್ಕುಗಳನ್ನು ಕೊಡುವುದು. ನೆರೆಕರೆಯವರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವುದು ಅತ್ಯಗತ್ಯವಾಗಿರುತ್ತದೆ.
ಈ ರೀತಿಯ ಜೀವನದಿಂದ ಸುದ್ರಢ ಕುಟುಂಬ , ಸುಭದ್ರ ಸಮಾಜ ನಿರ್ಮಿಸಲು ಸಾಧ್ಯವಿದೆ. ಆದ್ದರಿಂದ ಕುಟುಂಬ ಸಂಬಂಧಗಳನ್ನು ಬಲ ಪಡಿಸುವುದು ಇಂದಿನ ಕಾಲದ ಬೇಡಿಕೆಯಾಗಿದೆ ಎಂದರು.
ಬೀಬಿ ಬತುಲ್ ರವರ ಕುರ್ ಆನ್ ಪಠಣ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಆಯಿಷಾ ಶೈಮಾ ರವರು ಸ್ತುತಿಃ ವಚನ ಗೈದರು.
ಮಹಿಳಾ ವಿಭಾಗ ಉಡುಪಿ ಜಿಲ್ಲಾ ಸಂಚಾಲಕಿ ಕುಲ್ಸುಮ್ ಅಬೂಬಕ್ಕರ್ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ರಹಮತುನ್ನಿಸ ವಂದಿಸಿದರು.ಸ್ಥಾನೀಯ ಸಂಚಾಲಕಿ ಶೇಹೆನಾಜ್ ಕಾಪು ಕಾರ್ಯಕ್ರಮ ನಿರೂಪಿಸಿದರು.