ಬ್ರಹ್ಮಗಿರಿಯ ಸುರಭಿ ಫ್ರೆಂಡ್ಸ್ ವತಿಯಿಂದ ತಮ್ಮದೇ ಸದಸ್ಯರಾಗಿರುವ ಶಾಜಿ ಕುಮಾರ್ ರವರು ಹಗಲು-ರಾತ್ರಿ ನಿರಂತರ ಸೇವೆ ನೀಡುತ್ತಿರುವ ಶ್ರಮಜೀವಿ ಆಗಿರುವ ನಮ್ಮ ಸದಸ್ಯರ ಮುಖಾಂತರ ಮಾಡಿದಂತ ಕರೆಗೆ ಕೂಡಲೇ ಬಂದು ಸ್ಪಂದಿಸಿ ಹಲವಾರು ಜೀವವನ್ನು ಉಳಿಸಿದ ಕೀರ್ತಿ ಶಾಜಿ ಅವರದ್ದು. ಅಲ್ಲದೆ ಹಲವು ಬಾರಿ ಉಚಿತವಾಗಿ ಸೇವೆ ನೀಡಿ ಜನ ಮನ್ನಣೆಗಳಿಸಿದ್ದಾರೆ.
ಉಡುಪಿಯಲ್ಲಿ ಹೆಸರುವಾಸಿಯಾಗಿರುವ ಲೈಫ್ ಕೇರ್ ಆಂಬುಲೆನ್ಸ್ ನಮ್ಮ ದೇಶದ ಅನೇಕ ರಾಜ್ಯಗಳಿಗೆ ಪ್ರಯಾಣ ಮಾಡಿ ತಮ್ಮ ಸೇವೆ ನೀಡುತ್ತಿದೆ. ಇವರ ಸೇವಾ ಕಾರ್ಯವೈಖರಿಯನ್ನು ಮನಗಂಡು ಹಿರಿಯರ ಸಮ್ಮುಖದಲ್ಲಿ ಭಾನುವಾರದಂದು ಅವರನ್ನು ಅಭಿನಂದಿಸಲಾಯಿತು.
ಸುರಭಿ ರತನ್ ಹಾಗು ಸುಷ್ಮಾ ದಂಪತಿಗಳ ಪುತ್ರಿ ಭಕ್ತಿಕಾಳ ಇಂದು ಹುಟ್ಟಿದ ಹಬ್ಬ. ಸಮಾಜ ಸೇವೆಯಲ್ಲಿ ನಿರತರಾಗಿರುವ ಶಾಜಿ ಕುಮಾರ್ ರವರಿಗೆ ಬ್ರಹ್ಮಗಿರಿಯ ಸುರಭಿ ಫ್ರೆಂಡ್ಸ್ ಮೂಲಕ ಅಭಿನಂದನೆ ಸಲ್ಲಿಸಿ ತಮ್ಮ ಮಗಳ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡ ದಂಪತಿಗಳಿಗೊಂದು ಸಲಾಂ.