ಮಂಗಳೂರು : ಅವಿಭಜಿತ ದ.ಕ., ಉಡುಪಿ ಜಿಲ್ಲೆಯ ಛಾಯಾಗ್ರಾಹಕರ ಸಂಘಟನೆ ಯಾದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ಗೆ 2022ರ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಕಳೆದ 32 ವರ್ಷಗಳಿಂದ ವೃತ್ತಿಯೊಂದಿಗೆ ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಗುರುತಿಸಿಕೊಂಡಿದೆ.
1989ರ ಕಪ್ಪು ಬಿಳುಪು ಛಾಯಾಗ್ರಹಣದ ಕಾಲ. ಬಣ್ಣ ಚಿತ್ರಗಳ ಕಲರ್ ಲ್ಯಾಬ್ ಗಳುಮಂಗಳೂರಿಗೆ ಕಾಲಿಟ್ಟಿತು. ಇದು ಛಾಯಾ ಗ್ರಾಹಕರ ವ್ಯವಹಾರ ವಿಚಾರದಲ್ಲಿ ಸಮಸ್ಯೆ ಗಳನ್ನುಸೃಷ್ಟಿಸಿದ ಸಂದರ್ಭ ಬದಲಾವಣೆಯ ಕಾಲಘಟ್ಟದಲ್ಲಿ ಕಲರ್ ಚಿತ್ರಗಳು ಛಾಯಾ ಗ್ರಾಹಕರಿಗೆ ಪ್ರಯೋಜನವಾಯಿತು.
ಮಂಗಳೂರಿನಲ್ಲಿ ಛಾಯಾಗ್ರಾಹಕರ ಸಂಘಟನೆ ಸ್ಥಾಪನೆಗೊಂಡಿತು. ಅಧ್ಯಕ್ಷರಾಗಿ ಆರ್.ಬಿ ಸನೀಲ್ ಸ್ಥಾಪಕ ಪದಾಧಿಕಾರಿ ಗಳಾಗಿ ಕರುಣಾಕರ್, ಹಿಮ್ಮತ್ ಲಾಲ್ ವಸಂತ್, ಮೋಹನ್, ಜನಾರ್ದನ್, ಪ್ರಕಾಶ್ ಅಲೆವೂರಾಯ, ಸಂಜೀವ ಕಂಕನಾಡಿ, ಶಾಂತರಾಮ್ ಬಾಲ್ನೋ, ವಿಠ್ಠಲ್ ಚೌಟ, ಕೀರ್ತಿ ಮಂಗಳೂರು, ನವೀನ್ ಕುದ್ರೋಳಿ, ಡೆನ್ನಿಸ್ ರೇಗೋ, ಜಯಕರ ಸಮರ್ಥ ಆಯ್ಕೆಯಾದರು.
ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಹೊಸ ಕ್ರಾಂತಿ, ಛಾಯಾಗ್ರಹಕರ ಸಮಸೆಗಳಿಗೆ ಸಂದಿಸಿ,ಮತ್ತು ಜಿಲ್ಲೆಗೆ ಸೇರಿದ 14 ವಲಯಗಳ ಅಧ್ಯಕ್ಷರ ಸರ್ವಸದಸ್ಯರ ನೇತೃತ್ವದಲ್ಲಿ ಸದಸ್ಯರ ಕುಟುಂಬಗಳಿಗೆ ಸಹಾಯ ಧನವನ್ನು ತುರ್ತು ಸಂದರ್ಭದಲ್ಲಿ ನೀಡುತ್ತಿದೆ ಮತ್ತು ಆರೋಗ್ಯ ಶಿಬಿರಗಳನ್ನು ನಡೆಸಿ ಮಾಹಿತಿ ನೀಡುತ್ತಿದೆ.
ಈ ಸಂಘಟನೆ ಛಾಯಾಗ್ರಾಹಕ ಸಂಸಾರದ ಜೀವನಕ್ಕೂ ಆಸರೆಯಾಗಿದೆ. ನಮಗೆ ಸ್ವಲ್ಪ ಪರರಿಗೆ ಸರ್ವಸ್ವ ಎನ್ನುವಂತೆ ..! ಛಾಯಾ ಗ್ರಾಹಕರು ಒಂದಾಗಿ ಸಂಘಟನೆಯಡಿಯಲ್ಲಿ ಸಾರ್ವಜನಿಕರಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ನೇತ್ರ ಚಿಕಿತ್ಸೆ, ನೇತ್ರದಾನ, ಕನ್ನಡಕ ವಿತರಣೆ, ಗಾಲಿ ಕುರ್ಚಿ ವಿತರಣೆ ಮುಂತಾದ ಸಾಮಾಜಿಕ ಕಳಕಳಿಯ ಸ್ಪಂದನೆ ಹಾಗೂ ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆಯ ಮೂಲಕ ಜನಪರ ಅನ್ಯಾಯದ ವಿರುದ್ಧ ಹೋರಾಡಿ ಸ್ಟುಡಿಯೋದ ಮೂಲಭೂತ ಸಮಸ್ಯೆಗಳ ಬಗೆಹರಿಸುವಲ್ಲಿ ಪಕ್ಷ ಭೇದವಿಲ್ಲದೆ ಹೋರಾಡಿತು.
ಪ್ರತಿ ಸ್ಟುಡಿಯೋಗಳಿಗೂ ಸಂಪರ್ಕಿಸಿ ಸಂಘಟನೆಯನ್ನು ಗಟ್ಟಿಗೊಳಿಸಲಾಯಿತು. 1990 ರಲ್ಲಿ 57 ಜನರನ್ನು ಒಟ್ಟುಗೂಡಿಸಿದ ಸಂಘಟನೆ ಪ್ರಾರಂಭಗೊಂಡು ಇಂದು ಸುಮಾರು 4 ಸಾವಿರ ಸದಸ್ಯ ಬಲವನ್ನು ಪಡೆದು 32ನೇ ವರ್ಷಕ್ಕೆ ಕಾಲಿಟ್ಟಿದೆ. ಅವಿಭಜಿತ ಜಿಲ್ಲೆಯಲ್ಲಿ ಸದೃಢವಾದ ಸಂಘಟನೆ ಯಾಗಿ ಬೆಳೆಯುವುದರ ಜೊತೆಗೆ ಸಮಾಜ ಸೇವೆಯೊಂದಿಗೆ ಉಭಯ ಜಿಲ್ಲೆಯ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದೆ.