ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

​ಮಂಗಳೂರು : ಅವಿಭಜಿತ ದ.ಕ., ಉಡುಪಿ ಜಿಲ್ಲೆಯ ಛಾಯಾಗ್ರಾಹಕರ ಸಂಘಟನೆ ಯಾದ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಷನ್‌ಗೆ 2022ರ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಕಳೆದ 32 ವರ್ಷಗಳಿಂದ ವೃತ್ತಿಯೊಂದಿಗೆ ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಗುರುತಿಸಿಕೊಂಡಿದೆ.

ಛಾಯಾಗ್ರಾಹಕರ ಶ್ರೇಯೋಭಿವೃದ್ಧಿ, ಸಮಸ್ಯೆಗೆ ಸ್ಪಂದಿಸುತ್ತ ಬಂದಿರುವ ಈ ಸಂಘ ರಾಜ್ಯದಲ್ಲೇ ಅತ್ಯುತ್ತಮ ಛಾಯಾಗ್ರಾಹಕರ ಸಂಘಟನೆ ಎಂದು ಹೆಸರುವಾಸಿಯಾಗಿದೆ.
ದ.ಕ., ಉಡುಪಿ ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳ ಗೊಂಡಿರುವ ಈ ಸಂಘಟನೆಗೆ ಪ್ರಶಸ್ತಿ ಬಂದಿರುವುದು ಛಾಯಾಗ್ರಹಕರ ಮುಖ ದಲ್ಲಿ ಸಂತಸ ತಂದಿದೆ.
ಎಸ್ ಕೆಪಿಎ ನಡೆದು ಬಂದ ದಾರಿ: ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆ ಸಂಘಟನೆ ಹಲವಾರು ಎಡರು ತೊಡರುಗಳನ್ನು ನಿವಾರಿ ಸುತ್ತಾ ಎಲ್ಲಾ ಛಾಯಾಗ್ರಾಹಕರನ್ನು ಮಡಿಲಲ್ಲಿರಿಸಿ ಕಣ್ಣೀರು ಒರೆಸಿ, ಪ್ರೀತಿಯಿಂದ ಲಾಲಿಸಿ ಮಮತೆಯಿಂದ ಪಾಲಿಸಿ ಈ ಹಂತಕ್ಕೆ ಬಂದು ತಲುಪಿತು.

1989ರ ಕಪ್ಪು ಬಿಳುಪು ಛಾಯಾಗ್ರಹಣದ​ ಕಾಲ. ಬಣ್ಣ ಚಿತ್ರಗಳ​ ಕಲರ್‌ ಲ್ಯಾಬ್‌ ಗಳುಮಂಗಳೂರಿಗೆ ಕಾಲಿಟ್ಟಿತು. ಇದು ಛಾಯಾ ಗ್ರಾಹಕರ​ ವ್ಯವಹಾರ ವಿಚಾರದಲ್ಲಿ ಸಮಸ್ಯೆ ಗಳನ್ನುಸೃಷ್ಟಿಸಿದ ಸಂದರ್ಭ ಬದಲಾವಣೆಯ​ ಕಾಲಘಟ್ಟದಲ್ಲಿ ಕಲರ್‌ ಚಿತ್ರಗಳು​ ಛಾಯಾ ಗ್ರಾಹಕರಿಗೆ ಪ್ರಯೋಜನವಾಯಿತು.​ 
ಈ ಸಂದರ್ಭ ಛಾಯಾಗ್ರಾಹಕರ ಈ ಸಮಸ್ಯೆ​ ಬಗೆಹರಿಸಲು ಸಮಾನ ಮನಸ್ಕರು ಒಟ್ಟು​ ಸೇರಬೇಕಾಯಿತು. 12 ಜನ ಸದಸ್ಯರು ಒಟ್ಟು ಸೇರಿ​ ರೂಪು ರೇಷೆಗಳನ್ನು ಸಿದ್ದ ಪಡಿಸಿತು.


ಮಂಗಳೂರಿನಲ್ಲಿ ಛಾಯಾಗ್ರಾಹಕರ​ ಸಂಘಟನೆ ಸ್ಥಾಪನೆಗೊಂಡಿತು. ಅಧ್ಯಕ್ಷರಾಗಿ​ ಆರ್‌.ಬಿ ಸನೀಲ್‌ ಸ್ಥಾಪಕ ಪದಾಧಿಕಾರಿ ಗಳಾಗಿ​ ಕರುಣಾಕರ್‌, ಹಿಮ್ಮತ್‌ ಲಾಲ್‌ ವಸಂತ್‌, ಮೋಹನ್‌​,​ ಜನಾರ್ದನ್, ಪ್ರಕಾಶ್‌​ ಅಲೆವೂರಾಯ, ಸಂಜೀವ ಕಂಕನಾಡಿ,​ ಶಾಂತರಾಮ್‌ ಬಾಲ್ನೋ, ವಿಠ್ಠಲ್‌ ಚೌಟ, ಕೀರ್ತಿ​ ಮಂಗಳೂರು, ನವೀನ್‌ ಕುದ್ರೋಳಿ, ಡೆನ್ನಿಸ್‌ ರೇಗೋ, ಜಯಕರ ಸಮರ್ಥ ಆಯ್ಕೆಯಾದರು.

 

ಅವಿಭಜಿತ​ ದ.ಕ ಜಿಲ್ಲೆಯಾದ್ಯಂತ ಹೊಸ ಕ್ರಾಂತಿ,​ ಛಾಯಾ​ಗ್ರಹಕರ ಸಮಸೆಗಳಿಗೆ ಸಂದಿಸಿ,ಮತ್ತು ಜಿಲ್ಲೆಗೆ ಸೇರಿದ 14 ವಲಯಗಳ​ ಅಧ್ಯಕ್ಷರ ಸರ್ವಸದಸ್ಯರ ನೇತೃತ್ವದಲ್ಲಿ ಸದಸ್ಯರ ಕುಟುಂಬಗಳಿಗೆ ಸಹಾಯ ಧನವನ್ನು ತುರ್ತು ಸಂದರ್ಭದಲ್ಲಿ ನೀಡುತ್ತಿದೆ ಮತ್ತು ಆರೋಗ್ಯ ಶಿಬಿರಗಳನ್ನು ನಡೆಸಿ ಮಾಹಿತಿ ನೀಡುತ್ತಿದೆ.


ಈ ಸಂಘಟನೆ ಛಾಯಾಗ್ರಾಹಕ ಸಂಸಾರದ ಜೀವನಕ್ಕೂ ಆಸರೆಯಾಗಿದೆ. ನಮಗೆ ಸ್ವಲ್ಪ ಪರರಿಗೆ ಸರ್ವಸ್ವ ಎನ್ನುವಂತೆ ..! ಛಾಯಾ ಗ್ರಾಹಕರು ಒಂದಾಗಿ ಸಂಘಟನೆಯಡಿಯಲ್ಲಿ ಸಾರ್ವಜನಿಕರಿಂದ ಬೃಹತ್‌ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ನೇತ್ರ ಚಿಕಿತ್ಸೆ, ನೇತ್ರದಾನ, ಕನ್ನಡಕ ವಿತರಣೆ, ಗಾಲಿ ಕುರ್ಚಿ ವಿತರಣೆ ಮುಂತಾದ ಸಾಮಾಜಿಕ ಕಳಕಳಿಯ ಸ್ಪಂದನೆ ಹಾಗೂ ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆಯ ಮೂಲಕ ಜನಪರ ಅನ್ಯಾಯದ ವಿರುದ್ಧ ಹೋರಾಡಿ ಸ್ಟುಡಿಯೋದ ಮೂಲಭೂತ ಸಮಸ್ಯೆಗಳ ಬಗೆಹರಿಸುವಲ್ಲಿ ಪಕ್ಷ ಭೇದವಿಲ್ಲದೆ ಹೋರಾಡಿತು.

ಪ್ರತಿ ಸ್ಟುಡಿಯೋಗಳಿಗೂ ಸಂಪರ್ಕಿಸಿ ಸಂಘಟನೆಯನ್ನು ಗಟ್ಟಿಗೊಳಿಸಲಾಯಿತು. 1990 ರಲ್ಲಿ 57 ಜನರನ್ನು ಒಟ್ಟುಗೂಡಿಸಿದ ಸಂಘಟನೆ ಪ್ರಾರಂಭಗೊಂಡು ಇಂದು ಸುಮಾರು 4 ಸಾವಿರ ಸದಸ್ಯ ಬಲವನ್ನು ಪಡೆದು 32ನೇ ವರ್ಷಕ್ಕೆ ಕಾಲಿಟ್ಟಿದೆ. ಅವಿಭಜಿತ ಜಿಲ್ಲೆಯಲ್ಲಿ ಸದೃಢವಾದ ಸಂಘಟನೆ ಯಾಗಿ ಬೆಳೆಯುವುದರ ಜೊತೆಗೆ ಸಮಾಜ ಸೇವೆಯೊಂದಿಗೆ ಉಭಯ ಜಿಲ್ಲೆಯ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದೆ.
06-08-2005 ರಂದು ಧರ್ಮಸ್ಥಳದ ಧರ್ಮಾಧಿ ಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗಡೆ ಯವರ ದಿವ್ಯ ಹಸ್ತದಿಂದ ಗೋಪಾಲ ಸುಳ್ಯ ಅಧ್ಯಕ್ಷತೆಯಲ್ಲಿ ಮಂಗಳೂರಿನ ಹೃದಯ ಭಾಗದಲ್ಲಿ ಸ್ವಂತ ಕಟ್ಟಡ “ಛಾಯಾಭವನ” ಉದ್ಭಾಟನೆ ಗೊಂಡಿತು.
ಸಂಘದ ಸದಸ್ಯರ ಏಳಿಗೆಗಾಗಿ ರಜತ ಸಂಭ್ರಮದ ಸವಿನೆನಪಿಗಾಗಿ ಸದಸ್ಯರ ಆರ್ಥಿಕ ಸ್ವಾವಲಂಬನೆ ಗಾಗಿ ಸದಸ್ಯ ಪಾಲುದಾರರ ಬಲದಿಂದ ಕೆ. ವಾಸುದೇವ ರಾವ್  ನೇತೃತ್ವದಲ್ಲಿ  ಆರ್ಥಿಕ ಸಹಕಾರಿ ಸಂಘ ಸ್ಥಾಪನೆ ಮಾಡಲಾಯಿತು. ಇಂದು ಈ ಸಂಸ್ಥೆ ಯಶಸ್ವಿಯ ಹಾದಿಯಲ್ಲಿ ಮುನ್ನಡೆ ಯುತ್ತಿದೆ.
ಸಂಘಟನೆ ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡುತ್ತ ಛಾಯಾಗ್ರಾಹಕರ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಅವಿಭಾಜಿತ ಜಿಲ್ಲೆಯಲ್ಲಿ ಸದಸ್ಯರ ಪ್ರೀತಿ ವಿಶ್ವಾಸಗಳಿಗೆ ಭಾಜನರಾಗಿರುತ್ತದೆ.
ಪ್ರಸ್ತುತ ಅಧ್ಯಕ್ಷರಾಗಿರುವ ಆನಂದ್ ಎನ್ ಕುಂಪಲ,  ಕಾರ್ಯದರ್ಶಿ ನಿತಿನ್ ಬೆಳುವಾಯಿ, ಕೋಶಾಧಿಕಾರಿ ನವೀನ ರೈ ಹಾಗು ಪಧಾಧಿಕಾರಿಗಳು ಸೇರಿ ನಾಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ.     
 
 
 
 
 
 
 
 
 
 
 

Leave a Reply