ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಉಡುಪಿ ವಲಯದ ವತಿಯಿಂದ ರಾಷ್ಟ್ರಧ್ವಜ ವಿತರಣೆ 

ಕೇ​೦ದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಅಮೃತ​ ಮಹೋತ್ಸವದ ಪ್ರಯುಕ್ತ ಹರ್ ಘರ್ ತಿರಂಗಾ ಯೋಜನೆ ಯನ್ನು​ಹಮ್ಮಿಕೊಂಡಿದ್ದು ಇದರ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಉಡುಪಿ ವಲಯ, ಪಂಚಮಿ ಟ್ರಸ್ಟ್, ಗಾಂಧಿ ಆಸ್ಪತ್ರೆ ಕೊಡಮಾಡಲ್ಪಟ್ಟ ​ರಾಷ್ಟ್ರಧ್ವಜವನ್ನು ತನ್ನ ಸದಸ್ಯರಿಗೆ ವಿತರಿಸಿ ಅಗಸ್ಟ್ 13ರಿಂದ ಅಗಸ್ಟ್​ 15ರವರೆಗೆ ತಮ್ಮ ತಮ್ಮ ಮನೆಗಳಲ್ಲಿ ಹಾರಿಸಿ ಅಭಿಯಾನದ​ ಯಶಸ್ವಿಗೊಳಿಸಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಕಾರ್ಯದರ್ಶಿ ಪ್ರವೀಣ ಕೊರೆಯ, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಸುಳ್ಯ ವಲಯಾಧ್ಯಕ್ಷ ಹರೀಶ್, ಪೂರ್ವಾಧ್ಯಕ್ಷ ಸುಂದರ ಪೂಜಾರಿ ಕೊಳಲ್ಗಿರಿ, ಪ್ರಕಾಶ್ ಕೊಡಂಕೂರು, ಉಪಾಧ್ಯಕ್ಷ ಸುಧೀರ್ ಶೆಟ್ಟಿ , ಛಾಯಾಕಾರ್ಯದರ್ಶಿ ಸಂದೀಪ್ ಕಾಮತ್, ಸಂಘಟನಾ ಕಾರ್ಯದರ್ಶಿ ಮಂಜು ಎಂ.ಎಸ್, ದಾಮೋದರ್ ನಿಟ್ಟೂರು, ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಅಲೆವೂರು, ಸತೀಶ್ ಶೇರಿಗಾರ್ ಹಾಗು ಗುರುದತ್ ಕಾಮತ್ ಮೊದಲಾದವರಿದ್ದರು

 
 
 
 
 
 
 
 
 
 
 

Leave a Reply