ಕೇ೦ದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಹರ್ ಘರ್ ತಿರಂಗಾ ಯೋಜನೆ ಯನ್ನುಹಮ್ಮಿಕೊಂಡಿದ್ದು ಇದರ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಉಡುಪಿ ವಲಯ, ಪಂಚಮಿ ಟ್ರಸ್ಟ್, ಗಾಂಧಿ ಆಸ್ಪತ್ರೆ ಕೊಡಮಾಡಲ್ಪಟ್ಟ ರಾಷ್ಟ್ರಧ್ವಜವನ್ನು ತನ್ನ ಸದಸ್ಯರಿಗೆ ವಿತರಿಸಿ ಅಗಸ್ಟ್ 13ರಿಂದ ಅಗಸ್ಟ್ 15ರವರೆಗೆ ತಮ್ಮ ತಮ್ಮ ಮನೆಗಳಲ್ಲಿ ಹಾರಿಸಿ ಅಭಿಯಾನದ ಯಶಸ್ವಿಗೊಳಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಕಾರ್ಯದರ್ಶಿ ಪ್ರವೀಣ ಕೊರೆಯ, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಸುಳ್ಯ ವಲಯಾಧ್ಯಕ್ಷ ಹರೀಶ್, ಪೂರ್ವಾಧ್ಯಕ್ಷ ಸುಂದರ ಪೂಜಾರಿ ಕೊಳಲ್ಗಿರಿ, ಪ್ರಕಾಶ್ ಕೊಡಂಕೂರು, ಉಪಾಧ್ಯಕ್ಷ ಸುಧೀರ್ ಶೆಟ್ಟಿ , ಛಾಯಾಕಾರ್ಯದರ್ಶಿ ಸಂದೀಪ್ ಕಾಮತ್, ಸಂಘಟನಾ ಕಾರ್ಯದರ್ಶಿ ಮಂಜು ಎಂ.ಎಸ್, ದಾಮೋದರ್ ನಿಟ್ಟೂರು, ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಅಲೆವೂರು, ಸತೀಶ್ ಶೇರಿಗಾರ್ ಹಾಗು ಗುರುದತ್ ಕಾಮತ್ ಮೊದಲಾದವರಿದ್ದರು