ಶಿರ್ವ ರೋಟರಿ ಅಧ್ಯಕ್ಷರಾಗಿ ನ್ಯಾಯವಾದಿ ಜಯಕೃಷ್ಣ ಆಳ್ವ ಆಯ್ಕೆ

ಶಿರ್ವ:-ಉಡುಪಿ ಜಿಲ್ಲೆಯ ಹಿರಿಯ ಕ್ಲಬ್‌ಗಳಲ್ಲಿ ಒಂದಾದ ಶಿರ್ವ ರೋಟರಿಯ 51ನೇ ಸಾಲಿನ ಅಧ್ಯಕ್ಷರಾಗಿ ಪಾದೂರು ಜಯಕೃಷ್ಣ ಆಳ್ವ ಆಯ್ಕೆಯಾಗಿದ್ದಾರೆ. ಇವರು ಉಡುಪಿಯಲ್ಲಿ ನ್ಯಾಯವಾದಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಇತರ ಪದಾಧಿಕಾರಿಗಳು:- ನಿಕಟಪೂರ್ವ ಅಧ್ಯಕ್ಷರು – ವಿಷ್ಣುಮೂರ್ತಿ ಸರಳಾಯ, ಉಪಾಧ್ಯಕ್ಷರು -ಹೊನ್ನಯ್ಯ ಶೆಟ್ಟಿಗಾರ್, ಕಾರ್ಯದರ್ಶಿ-ಜಿನೇಶ್ ಬಲ್ಲಾಳ್ ಕುತ್ಯಾರು, ಕೋಶಾಧಿಕಾರಿ -ರಘುಪತಿ ಐತಾಳ್, ದಂಡಪಾಣಿ – ಕೋಡು ಸದಾನಂದ ಶೆಟ್ಟಿ, ನಿರ್ದೇಶಕರು :- ಸಂಘ ಸೇವೆ -ಹಸನಬ್ಬಶೇಖ್, ವೃತ್ತಿಪರ ಸೇವೆ -ಸುಧಾಕರ್ ಶೆಣೈ, ಸಮುದಾಯ ಸೇವೆ – ಪ್ರೊ.ವಿಠಲ್ ನಾಯಕ್, ಅಂತಾರಾಷ್ಟ್ರೀಯ ಸೇವೆ -ಮೈಕಲ್ ಮತಾಯಸ್, ನವಪೀಳಿಗೆ ಸಮಿತಿ -ಆಲ್ವಿನ್ ಅಮಿತ್ ಅರಾನ್ಹಾ, ರೋಟರಿ ಪ್ರತಿಷ್ಠಾನ -ಬಿ.ಪುಂಡಲೀಕ ಮರಾಠೆ, ಪೋಲಿಯೋ ಪ್ಲಸ್ -ಫಿಲಿಫ್ ಕಸ್ತಲಿನೊ, ಐಟಿ ಮತ್ತು ವೆಬ್ಸೆಟ್ – ಮೆಲ್ವಿನ್ ಡಿಸೋಜ, ಜಿಲ್ಲಾ ಯೋಜನೆಗಳು – ರಾಘವೇಂದ್ರ ನಾಯಕ್ ನೇಮಕ ಗೊಂಡಿದ್ದಾರೆ.

ಉಪನಿರ್ದೇಶಕರು:-ಸಾರ್ವಜನಿಕ ಸಂಪರ್ಕ – ಮತಾಯಸ್ ಲೋಬೊ, ಫೆಲೊಶಿಪ್ – ರೊನಾಲ್ಡ್ ಸಿಕ್ವೇರಾ, ಹಾಜರಾತಿ -ಹೆರಾಲ್ಡ್ ಕುಟಿನೊ, ರಹ್‌ಲಾ ಸಮಿತಿ -ಲೂಕಾಸ್ ಡಿಸೋಜ, ಚತುರ್ವಿಧ ಪರೀಕ್ಷೆ – ಡಾ.ಅರುಣ್‌ಕುಮಾರ್ ಹೆಗ್ಡೆ, ವೃತ್ತಿಪರ ಜಾಗೃತಿ – ರಫಾಯಲ್ ಮತಾಯಸ್, ಬಳಕೆದಾರರ ಹಕ್ಕುಗಳು -ಮೈಕಲ್ ರಮೇಶ್ ಡಿಸೋಜ, ಮಾಹಿತಿ ಹಕ್ಕು – ಡಾ.ಎನ್.ಎಸ್.ಶೆಟ್ಟಿ, ಮಹಿಳಾ ಸಬಲೀಕರಣ – ರೊನಾಲ್ಡ್ ಮಾರ್ಕ್ ಡಿಸೋಜ ಆಯ್ಕೆಯಾಗಿದ್ದಾರೆ.

 
 
 
 
 
 
 
 
 
 
 

Leave a Reply