ಶಿರ್ವ : ಶೃಂಗಾರ ಸಂಜೀವಿನಿ ಒಕ್ಕೂಟದ ಕಚೇರಿ ಉದ್ಘಾಟನೆ

ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ಮಟ್ಟದ ಶೃಂಗಾರ ಸಂಜೀವಿನಿ ಒಕ್ಕೂಟದ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯತ್ ವತಿಯಿಂದ ಒದಗಿಸಲಾದ ಕಚೇರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿ ಸಂಜೀವಿನಿ ಒಕ್ಕೂಟದಿಂದ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ಈ ಗ್ರಾಮಕ್ಕೆ ಸಿಗುವಂತಾಗಲಿ.ಒಕ್ಕೂಟದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಸಹಾಯ ತಂಡಗಳ ಸದಸ್ಯರು ಈ ಯೋಜನೆಯ ಮೂಲಕ ಒಳ್ಳೆಯ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಸಂಜೀವಿನಿಯ ಎಲ್ಲಾ ಸದಸ್ಯರೂ ಸ್ವ ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬಿಗಳಾಗಬೇಕು.ಮಾಡುವ ಮನಸ್ಸಿದ್ದರೆ ಹಲವಾರು ಮಾರ್ಗಗಳು ತೆರೆದುಕೊಳ್ಳುತ್ತವೆ.ಕಾಲಕಾಲಕ್ಕೆ ಬರುವಂತಹ ಸಮೀಕ್ಷೆ, ಸರ್ವೇಗಳನ್ನು ಸಂಜೀವಿನಿಯ ಸದಸ್ಯರೇ ಮಾಡುವಂತಾಗಬೇಕು.ಗ್ರಾಮ ಪಂಚಾಯತ್ ಮೂಲಕ ಸರ್ವ ಸಹಕಾರ ಸಂಜೀವಿನಿಗೆ ಸಿಗಲಿದೆ ಎಂದರು.

ಒಕ್ಕೂಟದ ಅಧ್ಯಕ್ಷೆ ಗೀತಾ ವಾಗ್ಳೆ ಸಮುದಾಯ ಬಂಡವಾಳದ ವಿನಿಯೋಗ ಹಾಗೂ ವಿತರಣೆ, ಮರುಪಾವತಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಂಗಳಾ, ಒಕ್ಕೂಟದ ಪದಾಧಿಕಾರಿಗಳಾದ ಆಶಾ ಆಚಾರ್ಯ, ದಿವ್ಯಾ ಸಂತೋಷ್, ಸುಪ್ರೀತಾ, ಸಂಧ್ಯಾ ಕಾಮತ್,ಆಶಾ ನಾಯಕ್, ಗಾಯತ್ರಿ ಆಚಾರ್ಯ,ಶಾಕಿರಾ ಬಾನು,ಸುಮಾ ಬಾಮನ್, ಮುಖ್ಯ ಪುಸ್ತಕ ಬರಹಗಾರ್ತಿ ಶ್ವೇತಾ, ಸಂಪನ್ಮೂಲ ವ್ಯಕ್ತಿಗಳಾದ ಸುಜಾತ, ರಮಣಿ ಮತ್ತು ಒಕ್ಕೂಟದ ಇತರ ಸದಸ್ಯರು ಉಪಸ್ಥಿತರಿದ್ದರು. ಗೀತಾ ವಾಗ್ಳೆ ಸರ್ವರನ್ನೂ ಸ್ವಾಗತಿಸಿ ಆಶಾ ಆಚಾರ್ಯರ ವಂದಿಸಿದರು.

 
 
 
 
 
 
 
 
 
 
 

Leave a Reply