ಶ್ರೀ ಶಾಂತಿಮತೀ ಪ್ರತಿಷ್ಠಾನ (ರಿ.) ಹಮ್ಮಿಕೊಂಡ ಸಾಧಕರೆಡೆ – ನಮ್ಮ ನಡೆ ತಿಂಗಳ ಕಾರ್ಯಕ್ರಮದಲ್ಲಿ ಫೆಬ್ರುವರಿ ತಿಂಗಳ ಸಾಧಕರಾಗಿ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಪ್ರಸಾರದಲ್ಲಿ ಮಾಡಿದ ಸೇವೆಗಾಗಿ ಜಂಬೂರು ಉಮಾ ಅಡಿಗರನ್ನು ಗೌರವಿಸಲಾಯಿತು.
ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ವಾರಂಬಳ್ಳಿ ಸ್ವಾಗತಿಸಿದರು. ವಿದ್ವಾನ್ ಡಾ. ವಿಜಯ ಮಂಜರ್ ಪ್ರಸ್ತಾವನೆಗೈದರು. ಯಶೋದಾ ಹೊಳ್ಳ ಸಾಧಕರ ಸಾಧನೆ ಬಗ್ಗೆ ತಿಳಿಸಿದರು. ಕೆನರಾ ಬ್ಯಾಂಕನ ನಿವೃತ್ತ ಪ್ರಬಂಧಕರಾದ ಎನ್.ಮಂಜುನಾಥ ಭಟ್ಟ ವಂದಿಸಿದರು. ಮಹೇಶ ಅಡಿಗ, ಅಲ್ತಾರು ಮಂಜುನಾಥ ಉಡುಪ, ರಾಮಚಂದ್ರ ಉಡುಪ, ಸಚ್ಚಿದಾನಂದ ಅಡಿಗ, ಗಣೇಶ ಭಟ್, ಹಾಗೂ ಉಮಾ ಅಡಿಗರ ಹಿತೈಷಿಯರು ಉಪಸ್ಥಿತರಿದ್ದರು.