ಸತ್ಯದ ತುಳುವೆರ್ ಸಂಘಟನೆಯಿಂದ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ 

ಸತ್ಯದ ತುಳುವೆರ್(ರಿ) ಉಡುಪಿ ಮಂಗಳೂರು ತಂಡದ ವತಿಯಿಂದ ​ಗುರುವಾರದಂದು ಕುಂಜಾರುಗಿರಿ ಪರಶುರಾಮ ದೇವಸ್ಥಾನದಲ್ಲಿ ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಉನ್ನತ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳಾದ ಕುಮಾರಿ ಶಮೀಕ್ಷ, ಮೇಘಶ್ರೀ, ರಕ್ಷಿತ, ಸುಶ್ಮಿತ, ಖುಷಿ ಹಾಗು ಮಾಸ್ಟರ್ ಶ್ರೇಯಸ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.​ ​

ವೇದಿಕೆಯಲ್ಲಿ ಖ್ಯಾತ  ದಂತ  ವೈದ್ಯರಾದ ನಿತೇಶ್ ಶೆಟ್ಟಿ ಮಂಗಳೂರು​ ​ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳ ಭವ್ಯ ಭವಿಷ್ಯಕ್ಕೆ ಶುಭ ಹಾರೈಸಿದರು. ತಂಡದ ಗೌರವ​ ​ಸಲಹೆಗಾರರಾದ ಗೀತಾಂಜಲಿ  ಸುವರ್ಣ ಕಟಪಾಡಿ, ರಂಜನ್ ಕುಮಾರ್ ಕಟಪಾಡಿ, ಸುಭಾಸ್ ನಗರ ರಿಕ್ಷಾ ಯೂನಿಯನ್ ಗೌರವ ಅಧ್ಯಕ್ಷ​ ​ಭುವನೇಶ್ ಎಲ್ ಪೂಜಾರಿ, ಎಸ್ಸೆಸ್  ಸ್ಪೋರ್ಟ್ಸ್ ಮಾಲಕ​ ​ಅರುಣ್ ಶೆಟ್ಟಿ ಉಡುಪಿ,  ಅಧ್ಯಕ್ಷ ಪ್ರವೀಣ್ ಬಂಗೇರ, ಉಪಾಧ್ಯಕ್ಷ ಶ್ರೀನಿವಾಸ್ ತೊಟ್ಟಂ, ಪ್ರವೀಣ್ ಕುರ್ಕಾಲು ಬಾಗವಹಿಸಿದ್ದರು.

ತಂಡದ ರಘುರಾಮ್ ಕೋಟಿ​ಯಾನ್ ನಿರೂಪಿಸಿದರು. ಸತ್ಯದ ತುಳುವೆರ್ ತಂಡದ ಸದಸ್ಯರುಗಳು,  ವಿದಾರ್ಥಿಗಳ ಪೋಷಕರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply