ಸತ್ಯದ ತುಳುವೆರ್(ರಿ) ಉಡುಪಿ ಮಂಗಳೂರು ತಂಡದ ವತಿಯಿಂದ ಗುರುವಾರದಂದು ಕುಂಜಾರುಗಿರಿ ಪರಶುರಾಮ ದೇವಸ್ಥಾನದಲ್ಲಿ ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಉನ್ನತ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳಾದ ಕುಮಾರಿ ಶಮೀಕ್ಷ, ಮೇಘಶ್ರೀ, ರಕ್ಷಿತ, ಸುಶ್ಮಿತ, ಖುಷಿ ಹಾಗು ಮಾಸ್ಟರ್ ಶ್ರೇಯಸ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಖ್ಯಾತ ದಂತ ವೈದ್ಯರಾದ ನಿತೇಶ್ ಶೆಟ್ಟಿ ಮಂಗಳೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳ ಭವ್ಯ ಭವಿಷ್ಯಕ್ಕೆ ಶುಭ ಹಾರೈಸಿದರು. ತಂಡದ ಗೌರವ ಸಲಹೆಗಾರರಾದ ಗೀತಾಂಜಲಿ ಸುವರ್ಣ ಕಟಪಾಡಿ, ರಂಜನ್ ಕುಮಾರ್ ಕಟಪಾಡಿ, ಸುಭಾಸ್ ನಗರ ರಿಕ್ಷಾ ಯೂನಿಯನ್ ಗೌರವ ಅಧ್ಯಕ್ಷ ಭುವನೇಶ್ ಎಲ್ ಪೂಜಾರಿ, ಎಸ್ಸೆಸ್ ಸ್ಪೋರ್ಟ್ಸ್ ಮಾಲಕ ಅರುಣ್ ಶೆಟ್ಟಿ ಉಡುಪಿ, ಅಧ್ಯಕ್ಷ ಪ್ರವೀಣ್ ಬಂಗೇರ, ಉಪಾಧ್ಯಕ್ಷ ಶ್ರೀನಿವಾಸ್ ತೊಟ್ಟಂ, ಪ್ರವೀಣ್ ಕುರ್ಕಾಲು ಬಾಗವಹಿಸಿದ್ದರು.
ತಂಡದ ರಘುರಾಮ್ ಕೋಟಿಯಾನ್ ನಿರೂಪಿಸಿದರು. ಸತ್ಯದ ತುಳುವೆರ್ ತಂಡದ ಸದಸ್ಯರುಗಳು, ವಿದಾರ್ಥಿಗಳ ಪೋಷಕರು ಭಾಗವಹಿಸಿದ್ದರು.