ಏಪ್ರಿಲ್ 4,2021, ಭಾನುವಾರ ಸಂಜೆ ಗಂಟೆ 3.30ಕ್ಕೆ , ಸ್ಥಳ: ಶಾಪ್ ನಂ. 214, ರೀಗಲ್ ನೆಕ್ಸ್ಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಪ್ರಥಮ ಮಹಡಿ, ಆದಿಉಡುಪಿ.
ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಪುತ್ತಿಗೆ ಮಠ ಜ್ಯೋತಿ ಬೆಳಗಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ(ರಿ) ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಶ್ರೀ ಸುರೇಶ್ ಗೋಕಾಕ್ ಕಚೇರಿ ಉದ್ಘಾಟಿಸಲಿದ್ದಾರೆ. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಉಡುಪಿ ಜಿಲ್ಲಾಧ್ಯಕ್ಷ ಶ್ರೀ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಕೆ. ರಘುಪತಿ ಭಟ್, ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಶ್ರೀ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ರಾಜ್ಯ, ಶ್ರೀಮತಿ ಸುಮಿತ್ರ ನಾಯಕ್ , ಅಧ್ಯಕ್ಷೆ, ಉಡುಪಿ ನಗರಸಭೆ, ಶ್ರೀ ಯಶಪಾಲ್ ಸುವರ್ಣ, ಅಧ್ಯಕ್ಷರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು, ಶ್ರೀ ಜಯಕರ ಶೆಟ್ಟಿ, ಇಂದ್ರಾಳಿ, ಅಧ್ಯಕ್ಷರು , ತುಳುಕೂಟ (ರಿ), ಉಡುಪಿ, ಶ್ರೀ ಜನಾರ್ದನ್ ಕೊಡವೂರು, ಪತ್ರಿಕಾ ವರದಿಗಾರರು, ಶ್ರೀ ಪ್ರಕಾಶ್ ಕೊಡವೂರು, ಅಧ್ಯಕ್ಷರು, ಸುಮನಸಾ ಕೊಡವೂರು (ರಿ.),
ಶ್ರೀ ಜಯರಾಮ ಅಂಬೆಕಲ್ಲು, ಅಧ್ಯಕ್ಷರು, ಶ್ರೀರಾಮ ಸೇನೆ ಉಡುಪಿ ಜಿಲ್ಲೆ, ಶ್ರೀ ಸುಜಯ್ ಪೂಜಾರಿ, ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ, ಉಡುಪಿ ಜಿಲ್ಲೆ, ಶ್ರೀ ಸಿದ್ದಪ್ಪ ಹೆಚ್ ಐಹೊಳೆ, ಅಧ್ಯಕ್ಷರು, ಹಾಲುಮತ ಮಹಾ ಸಭಾ, ಉಡುಪಿ ಜಿಲ್ಲೆ, ಶ್ರೀ ಹನುಮಂತ ಐಹೊಳೆ, ಅಧ್ಯಕ್ಷರು, ಕನಕದಾಸ ಸಮಾಜ ಸೇವಾ ಸಂಘ, ಉಡುಪಿ ಜಿಲ್ಲೆ, ಶ್ರೀ ಮಂಜುನಾಥ್ ನೋಟಗಾರ, ಅಧ್ಯಕ್ಷರು ಕರಾವಳಿ ಕುರುಬರ ಸಂಘ, ಮಂಗಳೂರು, ಆಗಮಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಮಹೇಶ್ ಗುಂಡಿಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.