ಝೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ವಿಜೇತರಾಕೇಶ್ ಪೂಜಾರಿ ಅವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಉಡುಪಿ ಜಿಲ್ಲೆ ವತಿಯಿಂದ ಗೌರವಿಸಲಾಯಿತು.  

ಝೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತನ್ನದೇ ಆದ ಶೈಲಿಯಲ್ಲಿ ಜನರನ್ನು ನಗಿಸಿ ಶೋ ನ ವಿಜೇತನಾಗುವ ಮೂಲಕ ಕನ್ನಡಿಗರ ಮನೆ ಮಾತಾದ, ತುಳುನಾಡ ಮಣ್ಣಿನ ಮಗ ಶ್ರೀ ರಾಕೇಶ್ ಪೂಜಾರಿ ಅವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಉಡುಪಿ ಜಿಲ್ಲೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಭೂಸೇನೆಯ ಯೋಧ ಕೃಷ್ಣ ಶೆಟ್ಟಿಬೆಟ್ಟು, ಅಂತರಾಷ್ಟ್ರೀಯ ಕರಾಟೆ ಪಟು ಪ್ರವೀಣಾ ಸುವರ್ಣ ಪರ್ಕಳ, ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಉಪಾಧ್ಯಕ್ಷ ಲಕ್ಷ್ಮಣ ಬಿ ಕೋಲ್ಕಾರ್,  ಕಾರ್ಯದರ್ಶಿ ಪಂಪೇಶ, ಚರಣ್ ಎಸ್ ಕೋಟ್ಯಾನ್ , ಪ್ರಶಾಂತ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು..
 
 
 
 
 
 
 
 
 
 
 

Leave a Reply