​ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ (ರಿ) ಹಾಗೂ ಶ್ರೀ ಮಂಜುನಾಥೇಶ್ವರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ (ರಿ) ಗಾಂಧಿನಗರ ವಾರ್ಷಿಕೋತ್ಸವ

​ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ (ರಿ) ಹಾಗೂ ಶ್ರೀ ಮಂಜುನಾಥೇಶ್ವರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ (ರಿ) ಗಾಂಧಿನಗರ ಬೈಕಾಡಿ ಇವರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ ಸಾಲಿಕೇರಿಯಲ್ಲಿ ಜಂಟಿಯಾಗಿ ವಾರ್ಷಿಕೋತ್ಸವವನ್ನು ಆಚರಿಸಿದರು. 
 
ಸಭೆಯ ಅಧ್ಯಕ್ಷತೆಯನ್ನು ಶ್ರೀ ಬಾಲಕೃಷ್ಣ ಎಮ್. ಶೆಟ್ಟಿಗಾರ್, ಆಡಳಿತ ಮೊಕ್ತೇಸರರು ಸಾಲಿಕೇರಿ ದೇವಸ್ಥಾನ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ಸಂಚಾಲಕರು, ಜಿ.ಎಮ್. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್,ಹಾರಾಡಿ ನೆರವೇರಿಸಿದರು. 
 
ಮುಖ್ಯ ಅತಿಥಿಗಳಾಗಿ ಶ್ರೀ ವಾಸುದೇವ ಬೈಕಾಡಿ, ಶ್ರೀ. ಬಿ. ಸುಪ್ರಸಾದ್ ಶೆಟ್ಟಿ, ಶ್ರೀ ನಿತ್ಯಾನಂದ ಬಿ. ಆರ್., ಶ್ರೀ ಗಣೇಶ್ ಶೆಟ್ಟಿ ಹೊನ್ನಾಳ, ಶ್ರೀ. ಎಸ್. ಜಯರಾಮಯ್ಯ, ಶ್ರೀ ರವಿ ಎಸ್. ಪೂಜಾರಿ, ಶ್ರೀ ಶ್ರೀನಿವಾಸ ಶೆಟ್ಟಿಗಾರ್, ಶ್ರೀ ಎಸ್. ಉಮೇಶ್ ನಾಯಕ್, ಶ್ರೀ ದಿನೇಶ್ ಆಚಾರ್ಯ ಬೈಕಾಡಿ ಸಭೆಯನ್ನು ಅಲಂಕರಿಸಿದರು.
 
 ವಿದ್ಯಾರ್ಥಿಗಳಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ವಿತರಣೆ ನಡೆಸಲಾಯಿತು. ಹಾರಾಡಿ  ದಿ| ಗುಲಾಬಿ ಮೋನಪ್ಪ ಶೆಟ್ಟಿ ಧತ್ತಿನಿಧಿ ವಿತರಿಸಲಾಯಿತು. ಯಕ್ಷಗಾನ ಸಂಘದ ವತಿಯಿಂದ ಗುರುಗಳಾದ ಕೋಟ ನರಸಿಂಹ ತುಂಗರಿಗೆ ಗುರುವಂದನೆ ನಡೆಸಲಾಯಿತು. ಕೀರ್ತಿ ಶೇಷ ಶ್ರೀ. ರಾಘವೇಂದ್ರ ಕುಮಾರ್, ಕರಂಬಳ್ಳಿ ಇವರ ಸ್ಮರಣಾರ್ಥ ಸನ್ಮಾನವನ್ನು ಯಕ್ಷ ದಂಪತಿಗಳಾದ ಶ್ರೀ ಪ್ರಮೋದ್ ತಂತ್ರಿ ಹಾಗೂ ನಿರುಪಮ ಪ್ರಮೋದ್‌ರಿಗೆ ಮಾಡಲಾಯಿತು. 
 
ಕಾರ್ಯಕ್ರಮದ ಪ್ರಮುಖ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮ ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ (ರಿ) ಇವರಿಂದ ‘ರತಿ ಕಲ್ಯಾಣ’ ಎಂಬ ಪೌರಾಣಿಕ ಪ್ರಸಂಗ ಸಂಪನ್ನಗೊಂಡಿತು . ಶ್ರೀ ಪ್ರಶಾಂತ್ ಶೆಟ್ಟಿ, ಶಿಕ್ಷಕರು ಹಾವಂಜೆಯವರು ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರರು ಸರ್ವರನ್ನು ಸ್ವಾಗತಿಸಿದರು. ಶ್ರೀ ಜಯಕರ ಬಿರ್ತಿಯವರು ಸರ್ವರಿಗೂ ಧನ್ಯವಾದ ಸಮರ್ಪಿಸಿದರು.

 

 

 
 
 
 
 
 
 
 
 
 
 

Leave a Reply