ರೋಟರಿ ಕ್ಲಬ್ ಸಾಹೇಬ್ರಕಟ್ಟೆ ವತಿಯಿಂದ ಸೈಬರಕಟ್ಟೆ ಪೇಟೆಯ 4 ರಸ್ತೆ ಸೇರುವ ಜಂಕ್ಷನ್ನಲ್ಲಿ ರೋಟರಿಯ ಚಿಹ್ನೆಯ ಸಂಕೇತ ಸಾರುವ ಚಕ್ರವನ್ನು ಸ್ಥಾಪಿಸಿ ರೋಟರಿ ಜಿಲ್ಲಾ ಗವರ್ನರ್ ರೋ. ಎಂ ಜಿ ರಾಮಚಂದ್ರ ಮೂರ್ತಿ ಯವರು ತಮ್ಮ ಅಧಿಕೃತ ಕ್ಲಬ್ ಭೇಟಿಯ ದಿನದಂದು ಉದ್ಘಾಟಿಸಿದರು. ರೋಟರಿ ಸಾಹೇಬ್ರಕಟ್ಟೆಯ ಅಧ್ಯಕ್ಷ ರೋ. ಯು ಪ್ರಸಾದ್ ಭಟ್ ರೋಟರಿಯ ವಲಯ 3ರ ಸಹಾಯಕ ಗವರ್ನರ್ ರೋ. ಪದ್ಮನಾಭ ಕಾಂಚನ್, ವಲಯ ಪ್ರತಿನಿಧಿ ರೋ ವಿಜಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ದಾಸ್ , ರೋ ಎಂ ರವೀಂದ್ರನಾಥ್ ಕಿಣಿ ಹಾಗೂ ರೋಟರಿಯ ಸಕಲ ಪದಾಧಿಕಾರಿಗಳು ಉಪಸ್ಥಿತರಿದ್ದರು.