ರೋಟರಿ ಕ್ಲಬ್ ವತಿಯಿಂದ ಗರಡಿಮಜಲು ಅಂಗನವಾಡಿ ಕೇಂದ್ರಕ್ಕೆ ಚಯರ್ ಕೊಡುಗೆ

ಕಲ್ಯಾಣಪುರ : ರೋಟರಿ ಕ್ಲಬ್ ವತಿಯಿಂದ ತನ್ನ ಸಾಮಾಜಿಕ ಸೇವಾ ಚಟುವಟಿಕೆಗಳಡಿ ಕೇಂದ್ರದ ಮಕ್ಕಳ ಉಪಯೋಗಕ್ಕಾಗಿ, 25 ಚಯರ್ ಕೊಡುಗೆಯಾಗಿ ನೀಡಲಾಯಿತು.

ಕೇಂದ್ರದ ಕಾರ್ಯಕರ್ತೆ ಭಾರತಿಯವರು ಸಲ್ಲಿಸಿದ ಈ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಿ ರೋ. ಸದಾನಂದ ನಾಯ್ಕ್  ಈ ದೇಣಿಗೆಗೆ ಪ್ರಾಯೋಜಕತ್ವ ನೀಡಿ ಸಹಕರಿಸಿದ್ದರು. 

 ಕ್ಲಬ್ ನ ಅಧ್ಯಕ್ಷ ರೋ.ಶಂಭುಶಂಕರ್, ರೋಟರಿ ವಲಯ ಸೇನಾನಿ ರೋ.ಬ್ರಯಾನ್ ಡಿಸೋಜ, ಗ್ರಾಮ ಪಂಚಾಯಿತಿ ಸದಸ್ಯ ರಾದ ಜಯಂತಿ ವಿ ಕೋಟ್ಯಾನ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು ಮತ್ತು ಮಕ್ಕಳ ಪೋಷಕರುಗಳ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಕೊಡುಗೆಯನ್ನು ಹಸ್ತಾಂತರಿಸಿ ಶುಭ ಹಾರೈಕೆಗಳನ್ನು ಸಲ್ಲಿಸಿದರು. ರೋ ಮಮತಾ ಶೆಟ್ಟಿ ಹಾಜರಿದ್ದರು.

 
 
 
 
 
 
 
 
 
 
 

Leave a Reply