ರಾಮದಾಸ್ ಪ್ರಭು ಶೈಕ್ಷಣಿಕ ಟ್ರಸ್ಟ್ (ರಿ.) ವತಿಯಿಂದ ಇನ್ನಾ ಪ್ರೌಢಶಾಲೆಗೆ ಕೊಡುಗೆ

ಕಾರ್ಕಳ : ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಮ್. ವಿ. ಶಾಸ್ತ್ರಿ ಪ್ರೌಢಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಪಲಿಮಾರು ಗ್ರಾಮದಲ್ಲಿ ರಾಮದಾಸ್ ಪ್ರಭು ಶೈಕ್ಷಣಿಕ ಟ್ರಸ್ಟ್ (ರಿ.) ವತಿಯಿಂದ 25,000 ರೂಪಾಯಿಗಳ ಕೊಡುಗೆಯನ್ನು ನೀಡಲಾಗಿದ್ದು ಅದಕ್ಕಾಗಿ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರಾದ ರಾಮದಾಸ್ ಜಿ. ಪ್ರಭುರನ್ನು ಶಾಲೆಯ ಪರವಾಗಿ ಅಭಿನಂದಿಸಲಾಯಿತು.

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ರಾವ್ ಪಿ. ಎನ್. ಅವರು ರಾಮದಾಸ್ ಪ್ರಭುಗೆ ಶಾಲು ಹೊದಿಸಿ ಗೌರವಿಸಿದರು ಮತ್ತು ಕೃತಜ್ಞತೆ ಸಲ್ಲಿಸಿದರು. ರಾಮದಾಸ್ ಜಿ ಪ್ರಭು ಮಾತನಾಡಿ ಮುಂದೆ ಕೂಡ ತನ್ನ ಕೊಡುಗೆಗಳನ್ನು ಶಾಲೆಗೆ ನೀಡುವುದಾಗಿ ಭರವಸೆ ನೀಡಿದರು. ಶಿಕ್ಷಕ ರಾಜೇಂದ್ರ ಭಟ್ ವಂದಿಸಿದರು.

 
 
 
 
 
 
 
 
 

Leave a Reply