ರೋಟರಿ ಕ್ಲಬ್ ಉಡುಪಿ ರಾಯಲ್ ವತಿಯಿಂದ  ವಿನೂತನವಾಗಿ ಮಹಿಳಾ ದಿನಾಚರಣೆ. 

ಮುಂಜಾನೆ ಆರು ಗಂಟೆಗೆ ಉಡುಪಿ ನಗರಸಭೆಯಲ್ಲಿ ಎಲ್ಲ ಪೌರ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ಅವರೆಲ್ಲರನ್ನು ಅಭಿನಂದಿಸಲಾಯಿತು. ಐದು ಹಿರಿಯ ಪೌರ ಕಾರ್ಮಿಕ ರಾದ ಸಿಂಧು ಶೇಖರ, ಶಾಂತಾ ಸುಂದರ, ಶಾಂತಿ ಬಾಯಿ, ಗಿರಿಜಮ್ಮ ಅರಸೀಕೆರೆ, ತಾರಾಮಿ ಬಾಯಿ ರವರುಗಳನ್ನು ವಿಶೇಷವಾಗಿ ಗುರುತಿಸಿ ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.  ಪೌರಾಯುಕ್ತ ಡಾ. ಉದಯಕುಮಾರ್ ಶೆಟ್ಟಿ, ಸಹಾಯಕ ಕಾರ್ಯ ನಿರ್ವಾಹಕ ಅಭಯಂತರ ಮೋಹನರಾಜ್, ಅರೋಗ್ಯ ಅಧಿಕಾರಿಗಳಾದ ಕರುಣಾಕರ್ ಮತ್ತು ಶಶಿರೇಖಾ, ರೋಟರಿ ಸಹಾಯಕ ಗವರ್ನರ್  ಆನಂದ್ ಉದ್ಯಾವರ,  ಮಾಜಿ ಸಹಾಯಕ ಗವರ್ನರ್ ಗಳಾದ  ಡಾ. ಬಾಲಕೃಷ್ಣ ಮದ್ದೋಡಿ, ಸಹಕಾರ ಭಾರತಿ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ, ತಾಲೂಕು ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಲ್ವಿನ್ ಅಂದ್ರಾದೆ, 
ತೇಜೆಶ್ವರ್ ರಾವ್, ರಮೇಶ್ ಆಚಾರ್ಯ ಮಂಗಳ ಚಂದ್ರಕಾಂತ್, ಲಕ್ಷ್ಮಿ ಶೆಟ್ಟಿ, ಪ್ರಫುಲ್ಲ, ಹಾಜರಿದ್ದರು. ರಾಯಲ್ ಅಧ್ಯಕ್ಷ ಮಂಜುನಾಥ್ ಮಣಿಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಾಪಕ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 

Leave a Reply