ಉಡುಪಿ : ಗುರು ಪೂರ್ಣಿಮಾ ಪ್ರಯುಕ್ತ ಜು. 29 ಕಲ್ಯಾಣಪುರದ ರೋಟರಿ ಕ್ಲಬ್ ವತಿಯಿಂದ ನಾಡಿನ ಪ್ರಸಿದ್ಧ ಯಕ್ಷಗಾನ ವೇಷಧಾರಿ , ಹಿಮ್ಮೇಳ ವಾದಕ, ಯಕ್ಷಗುರು ರಾಜೀವ್ ತೋನ್ಸೆಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಅಧ್ಯಕ್ಷ ರೋ. ಶಂಭು ಶಂಕರ್, ಕಾರ್ಯದರ್ಶಿ ರೋ. ಪ್ರಕಾಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ರೋ. ರಾಮಕೃಷ್ಣ ಆಚಾರ್ಯ ಅತಿಥಿಯನ್ನು ಪರಿಚಯಿಸಿದರು, ರೋ. ರೀನಾ ಆನಂದ ಶೆಟ್ಟಿ ಗುರು ಪೌರ್ಣಮಿಯ ಮಹತ್ವವನ್ನು ತಿಳಿ ಹೇಳಿದರು. ರೋ.ಗಿರೀಶ್ ಚಂದ್ರ ನಿರೂಪಿಸಿದರು.