ರೋಟರಿ ವರ್ಷ 2020-21 ನ್ನು ಯಶಸ್ವಿಯಾಗಿ ಪೂರೈಸಿರುವ ವಲಯ 4ರ ಎಲ್ಲಾ ರೋಟರಿ ಕ್ಲಬ್ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಗೌರವಾರ್ಪಣೆ ಹಾಗೂ ರೋಟರಿ ಅವಕಾಶಗಳನ್ನು ನೀಡುತ್ತದೆ ತಂಡದ ನಾಯಕರನ್ನು ಗುರುತಿಸುವ “ಧನ್ಯತೆ’ ಕಾರ್ಯಕ್ರಮನ್ನು ನಿಕಟಪೂರ್ವ ಸಹಾಯಕ ಗವರ್ನರ್ ಆನಂದ್ಉದ್ಯಾವರ್ ನೇತೃತ್ವದಲ್ಲಿ ಭಾನುವಾರದಂದು ಉಡುಪಿಯ ಕಿದಿಯೂರು ಹೋಟೇಲಿನಲ್ಲಿ ಜರಗಿಸಲಾಯಿತು.
ಸವಾಲುಗಳ ಮಧ್ಯೆಯೂ ಮನುಕುಲದ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಇಡೀ ವರ್ಷ ಸೇವಾ ಚಟುವಟಿಕೆಯೊಂದಿಗೆ 116ವರ್ಷ ಇತಿಹಾಸ ಹೊಂದಿರುವ ರೋಟರಿ ಪಯಣವನ್ನು ಯಶಸ್ವಿಯಾಗಿ ನಿರ್ವಹಿಸಿದ ವಲಯದ ಯಶಸ್ವಿ ಅಧ್ಯಕ್ಷ ಕಾರ್ಯದರ್ಶಿಗಳಾದ ಕಟಪಾಡಿ ರೋಟರಿಯ ಗಣೇಶ್ ಕಿಣಿ ಹಾಗೂ ಸಂತೋಷ್ ಶೆಟ್ಟಿ, ಉದ್ಯಾವರ ರೋಟರಿಯ ದೀಕ್ಷತ್ ಶೆಟ್ಟಿ, ಅಬ್ದುಲ್ ಫಿರೋಜ್, ಉಡುಪಿ ರೋಟರಿಯ ರಾಧಿಕಾ ಲಕ್ಶ್ಮೀ ನಾರಾಯಣ್, ದೀಪಾ ಭಂಡಾರಿ, ಮಣಿಪಾಲ ರೋಟರಿಯ ಪ್ರಶಾಂತ್ ಹೆಗ್ಡೆ, ಶ್ರೀಪತಿ ಪಿ, ಮಣಿಪಾಲ ಟೌನ್ ರೋಟರಿಯ ಪ್ರೊ| ರವೀಂದ್ರನಾಥ ನಾಯಕ್, ಜ್ಯೋತಿ ಆರ್ ನಾಯಕ್, ಮಣಿಪಾಲ ಹಿಲ್ಸ್ ರೋಟರಿಯ ಭಾಸ್ಕರ ರಾವ್, ನಾರಾಯಣ್ ಭಟ್, ಪರ್ಕಳ ರೋಟರಿಯ ಗೀತಶ್ರೀ ಉಪಾಧ್ಯಾಯ, ಜಯಲಕ್ಷ್ಮೀ ಶೆಟ್ಟಿಗಾರ್, ಪೆರ್ಡೂರು ರೋಟರಿಯ ಸಂತೋಷ್ ಕುಲಾಲ್, ಸಂದೀಪ್ ಶೆಟ್ಟಿ ಹಾಗೂ ಉಡುಪಿ ರಾಯಲ್ ರೋಟರಿಯ ಮಂಜುನಾಥ ಮಣಿಪಾಲ ಇವರೆಲ್ಲರನ್ನು ಸನ್ಮಾನಿಸಲಾಯಿತು.
ರೋಟರಿ 2020-21ನೇ ಸಾಲಿನ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್, ಕೋವಿಡ್ ಸವಾಲಿನಲ್ಲೂ ಜಿಲ್ಲೆ ಸದಸ್ಯತ್ವ ವೃದ್ಧಿ ಹಾಗೂ ರೋಟರಿ ದತ್ತಿನಿಧಿಗೆ ದೇಣಿಗೆ ಸಂಗ್ರಹಿಸುವಲ್ಲಿ ಮಹತ್ತರ ಸಾಧನೆ ಮಾಡಿದೆ, ರೋಟರಿ ನೈಜ ನಾಯಕತ್ವಕ್ಕೆ ಮಾದರಿ ಎಂದು ಶುಭಹಾರೈಸಿದರು.ಮುಖ್ಯ ಅತಿಥಿ ಸುಬ್ರಹ್ಮಣ್ಯ ಬಾಸ್ರಿ ಮಾತನಾಡಿ ಸ್ನೇಹ ಒಡನಾಟದಿಂದ ಸೇವೆಯ ಅಡಿಗಲ್ಲನ್ನು ಮನುಕುಲಕ್ಕೆ ನೀಡಿ ಇಂದು ಜನಮಾನಸದಲ್ಲಿ ರೋಟರಿಯ ಸೇವೆ ಮನೆಮಾತಾಗಿದೆ. ಇದನ್ನು ನಿಭಾಯಿಸುತ್ತಿರುವ ರೋಟೇರಿಯನ್ನುರು ನಿಜವಾಗಿಯೂ ಧನ್ಯರು.
ಈ ಕಾರ್ಯಕ್ರಮ ನಾಯಕರಲ್ಲಿ ಇನ್ನಷ್ಟು ಸೇವೆಯ ಪುಟಗಳನ್ನು ತೆರೆಯಲು ನಾಂದಿಯಾಗಲಿ ಎಂದು ಹೇಳಿದರು. ವಲಯ ಟ್ರೈನರ್ ಡಾ| ಎ ಗಣೇಶ್ ರೋಟರಿ ಬಗ್ಗೆ ತಿಳಿಸಿದರು. ರೋಟರಿ 2020-21ನೇ ಸಾಲಿನ ರೋಟರಿ ಪ್ರಥಮ ಮಹಿಳೆ ವರದಾಂಬ ಆರ್ ಭಟ್. ವಲಯ ಸೇನಾನಿ ಕಟಪಾಡಿ ಶಂಕರ ಪೂಜಾರಿ, ಗುರುಪ್ರಸಾದ್ ಕಾಮತ್, ಸಂತೆಕಟ್ಟೆ ರಾಮದಾಸ ನಾಯಕ್ ಉಪಸ್ಥಿತರಿದ್ದರು.
ಆನಂದ್ ಉದ್ಯಾವರ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ರಾಜೇಶ್ ಡಿ ವಂದಿಸಿದರು. ಸತೀಶ್, ವಸಂತ ಕೋಟ್ಯಾನ್ ನಿರ್ವಹಿಸಿದರು.