ರೋಟರಿ ಉಡುಪಿಯ ಪದಪ್ರಧಾನ ಸಮಾರಂಭ

ರೋಟರಿ ಉಡುಪಿ ಯ ಪದಪ್ರದಾನ ಸಮಾರಂಭವು ಉಡುಪಿಯ ಟೌನ್ ಹಾಲ್ ನ ಮಿನಿ ಸಭಾಂಗಣದಲ್ಲಿ ನಡೆಯಿತು. ರೋಟರಿ ವರ್ಷ.2021-22ರ ನೂತನ ಅಧ್ಯಕ್ಷರಾಗಿ ರೋ. ಹೇಮಂತ್ ಯು. ಕಾಂತ್, ಕಾರ್ಯದರ್ಶಿಯಾಗಿ ರೋ. ಜೆ. ಗೋಪಾಲಕೃಷ್ಣ ಪ್ರಭು ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲೆ 3182ರ ಮಾಜಿ ಗವರ್ನರ್ ರೋ. ಅಭಿನಂದನ್ ಶೆಟ್ಟಿ ಅವರು ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿದರು.

ಗೌರವಾನ್ವಿತ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಸುರೇಶ್ ಶೆಣೈ ಹಾಗೂ ವಲಯ ಸೇನಾನಿ ರೋ. ಅಮಿತ್ ಅರವಿಂದ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಲಬ್ ಬುಲೆಟಿನ್ ಕೋಂಚ್ ನ್ನು ಮತ್ತು ಸದಸ್ಯರಿಗಾಗಿ ರೋಟರಿಯ ಬಗ್ಗೆ ಕಿರುಪರಿಚಯವುಳ್ಳ ಮಾಹಿತಿ ಪತ್ರ ವನ್ನು ಬಿಡುಗಡೆಗೊಳಿಸಲಾಯಿತು.ನೂತನ ಅಧ್ಯಕ್ಷ ರೋ‌. ಹೇಮಂತ್ ಯು. ಕಾಂತ್ ಪದಸ್ವೀಕಾರ ಭಾಷಣ ಮಾಡಿದರಲ್ಲದೇ, ತನ್ನ ನೂತನ ತಂಡದ ಪರಿಚಯ ಮಾಡಿದರು. ನಿಕಟಪೂರ್ವ ಅಧ್ಯಕ್ಷೆ ರೋ. ರಾಧಿಕಾ ಲಕ್ಷ್ಮೀನಾರಾಯಣ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ 2020-21ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು.

5 ಮಂದಿ ನೂತನ ಸದಸ್ಯರಾಗಿ ಕ್ಲಬ್ ಗೆ ಸೇರ್ಪಡೆಗೊಂಡರಲ್ಲದೇ, 5 ಮಂದಿ ಸದಸ್ಯರು PHF ದೇಣಿಗೆಯನ್ನು ನೀಡಿದರು. ಬಡ ಮಧುಮೇಹಿ ರೋಗಿಗಳಿಗೆ ಉಚಿತ ಇನ್ಸುಲಿನ್ ವಿತರಿಸುವ ಕ್ಲಬ್ ನ ಖಾಯಂ ಯೋಜನೆಗೆ ದಾನಿಗಳಾದ ರೋ. ಟಿ. ಗುರುರಾಜ್ ಭಟ್ ಮತ್ತು ಶ್ರೀಮತಿ ಅನ್ನಾ ಮರಿಯಾ ಮೋರಸ್ ನೀಡಿದ ದೇಣಿಗೆಯನ್ನು ಕ್ಲಬ್ ನ ವೈದ್ಯಕೀಯ ಯೋಜನೆಗಳ ಕೋರ್ಡಿ ನೇಟರ್ – ರೋ. ಡಾ. ಪ್ರಭಾಕರ್ ಮಲ್ಯರಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ರೋ. ವನಿತಾ ಉಪಾಧ್ಯಾಯ ಪ್ರಾರ್ಥನೆಗೈದರು. ಕಾರ್ಯದರ್ಶಿ ರೋ. ಜೆ. ಗೋಪಾಲಕೃಷ್ಣ ಪ್ರಭು ಧನ್ಯವಾದಗೈದರು, ರೋ. ಜನಾರ್ದನ್ ಭಟ್ ಮತ್ತು ರೋ. ಚಂದ್ರಶೇಖರ್ ಅಡಿಗರು ಜಂಟಿಯಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply