ಶಿಕ್ಷಕರ ದಿನಾಚರಣೆ- 27 ಶಿಕ್ಷಕರಿಗೆ ರೋಟರಿ ಗೌರವ

ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ವಿಶೇಷವಾಗಿ ರೋಟರಿ ಜಿಲ್ಲೆ 3182 ಇದರ ವಲಯ ಮೂರರ ಎಲ್ಲಾ ಶಿಕ್ಷಕ ಸದಸ್ಯರುಗಳನ್ನು ಆಹ್ವಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬ್ರಹ್ಮಾವರ, ಹಂಗಾರಕಟ್ಟೆ, ಬಾರ್ಕೂರು, ಸಾಯಿಬ್ರಕಟ್ಟೆ, ಅಂಬಲಾಪಾಡಿ, ಉಡುಪಿ ಮಿಡ್ ‌ಟೌನ್ ,ರಾಯಲ್ ಬ್ರಹ್ಮಾವರ, ಕೊಕ್ಕರ್ಣೆ ಹಾಗೂ ಕಲ್ಯಾಣಪುರ ರೋಟರಿ ಕ್ಲಬ್ಬಿನ ಸದಸ್ಯರುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 27 ಮಂದಿಯನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸಲಾಯಿತು. ವಲಯ ಮೂರರ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶಿಕ್ಷಕಕರ ದಿನಾಚರಣೆಯನ್ನು ಇಷ್ಟೊಂದು ಸಂಖ್ಯೆಯ ಶಿಕ್ಷಕರುಗಳನ್ನು ಗುರುತಿಸಿ ಗೌರವಿಸಿರುವುದಕ್ಕೆ ಮುಖ್ಯ ಅತಿಥಿಗಳು ಹಾಗೂ ಸನ್ಮಾನಿತರು ಶ್ಲಾಘಿಸಿದರು.

ರೋ ಪಿ.ಎಚ್.ಎಫ್ ಜಯಪ್ರಕಾಶ್ ಕೆದ್ಲಾಯ, ವಲಯ ಮೂರರ ಸಹಾಯಕ ಗವರ್ನರ್ ರೋ. ಆನಂದ ಶೆಟ್ಟಿ, ವಲಯ ಸೇನಾನಿ ರೋ. ಇಕ್ಬಾಲ್ ಹಮ್ಮಾಜಿ, ಜಿಲ್ಲಾ ಮಾಜಿ ಗವರ್ನರ್ ರೋ. ರಾಜಾರಾಂ ಭಟ್ ಹಾಗೂ ವೃತ್ತಿ ಸೇವಾ ನಿರ್ದೇಶಕರಾದ ರೋ ಎಮ್ ಮಹೇಶ್ ಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು. ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷೆ ರೋ. ಶಾರ್ಲೆಟ್ ಲುವಿಸ್ ಸ್ವಾಗತಿಸಿದರು. ಕಾರ್ಯದರ್ಶಿ ರೋ. ರೀನಾ ಆನಂದ ಶೆಟ್ಟಿ ವಂದಿಸಿದರು. ರೋ. ಅಲೆನ್ ಲುವಿಸ್, ರೋ. ಗಿರೀಶ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply