ರೋಟರಿ ಜಿಲ್ಲೆ ವಲಯ ನಾಲ್ಕರ ಸದಸ್ಯ ತ್ವ ವೃಧ್ಧಿ ಮತ್ತು ಪಬ್ಲಿಕ್ ಇಮೇಜ್ ಸೆಮಿನಾರ್ ರೋಟರಿ ಉಡುಪಿ ಮತ್ತು ಮಣಿಪಾಲ ಕ್ಲಬ್ ಗಳ ಆತಿಥ್ಯ ದಲ್ಲಿ ಕುಂಜಿಬೆಟ್ಟಿನ ಶಾರದಾರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ನಡೆಯಿತು. ಕಾರ್ಯವನ್ನು ಉದ್ಘಾಟಿಸುತ್ತಾ ಜಿಲ್ಲಾಗವರ್ನರ್ ಡಾ.ಜಯಗೌರಿಯವರು ರೋಟರಿಗೆ ಸದಸ್ಯತ್ವ ವೃಧ್ದಿಯ ಅವಶ್ಯಕತೆ ಮತ್ತು ಹೊಸ ಸದಸ್ಯರು ರೋಟರಿ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿಭಾಗವಹಿಸಿ ತಮ್ಮನ್ನು ತೊಡಗಿಸಿಕೊಂಡಲ್ಲಿ ನಿಜವಾಗಿ ರೋಟರಿಯನ್ ಆಗಿ ತಮ್ಮ ಮತ್ತು ಸಂಸ್ಥೆ ಯ ಅಭಿವೃದ್ಧಿ ಯ ಬಾಗವಾಗುವಂತೆ ಕರೆನೀಡಿದರು. ಮುಖ್ಯ ಭಾಷಣಕಾರ ರಾಗಿ ಆಗಮಿಸಿದ ಮಾಜಿ ಗವರ್ನರ್ ರೋ. ಅಭಿನಂದನ ಶೆಟ್ಟಿ ಯವರು ಅಂತರಾಷ್ಟ್ರೀಯ ರೋಟರಿ ಯ ವಿವಿಧ ಮಜಲುಗಳನ್ನುವಿವರಿಸಿ ರೋಟರಿ ಸದಸ್ಯತ್ವವನ್ನು ಹೇಗೆ ಲಾಭ ದಾಯಕವನ್ನಾಗಿಸ ಬಹುದೆಂಬ ಬಗ್ಗೆ ವಿವರಿಸಿ ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷ ರ ಕರೆಯಂತೆ ಮಾನಸಿಕವಾಗಿ ಮತ್ತು ಅನುಷ್ಠಾನದಲ್ಲಿ ರೋಟರಿ ಯನ್ನು ಕಲ್ಪಿಸಿಕೋಳ್ಳಿ ಮತ್ತು ಯಶಸ್ವಿಯಾಗಿ ಎಂದು ಕರೆನೀಡಿದರು. ಪ್ರಾರಂಭದಲ್ಲಿ ಮಣಿಪಾಲ ರೋಟರಿ ಯ ಅಧ್ಯಕ್ಷೆ ರೋ.ರೇಣುಜಯರಾಂ ರವರು ಸ್ವಾಗತಿಸಿ, ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯ ರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಸದಸ್ಯತ್ವ ವೃಧ್ದಿ ಸಭಾಪತಿ ರೋ.ಕೃಷ್ಣ ಕಾಂಚನ್, ಪಬ್ಲಿಕ್ ಇಮೇಜ್ ಚಯರ್ ಮೆನ್ ರೋ.ಸತ್ಯೇಂದ್ರ ಪೈ, ಸದಸ್ಯತ್ವ ಆಕರ್ಷಣೆ ಸಭಾಪತಿ ರೋ.ಜಗನ್ನಾಥ ಕೋಟೆ ಮತ್ತು ಸದಸ್ಯತ್ವ ತೊಡಗಿಸಿ ಕೊಳ್ಳುವಿಕೆ ಸಭಾಪತಿ ರೋ.ಸತೀಶ್ ಶೆರೆಗಾರ್ ಅವರುಗಳು ಸಮಯೋಚಿತ ವಾಗಿ ಮಾತನಾಡಿದರು. ರೋಟರಿ ಉಡುಪಿ ಅಧ್ಯಕ್ಷ ರೋ.ಸುಬ್ರಹ್ಮಣ್ಯ ಕಾರಂತರು ವಂದನಾರ್ಪಣೆ ಮಾಡಿದರು.
ನಂತರ ನಡೆದ ಸಭೆಯಲ್ಲಿ ಅನೇಕ ಹೊಸ ಸದಸ್ಯರು ತಮ್ಮ ಅಭಿಪ್ರಾಯ ವನ್ನು ಮಂಡಿಸಿದರು. ತದನಂತರ ಗುಂಪು ಚರ್ಚೆಯಲ್ಲಿ ಪಾಲ್ಗೊಂಡ ಹಿರಿಯ ಸದಸ್ಯರಾದ ರೋ. ಸುಬ್ರಹ್ಮಣ್ಯ ಬಾಸ್ರಿ, ರೋ.ಡಾ.ಗಣೇಶ್, ರೋ.ಡಾ. ಸೇಸಪ್ಪ ರೈಯವರು ಸದಸ್ಯರಿಗೆ ರೋಟರಿ ವಿಶಯಗಳನ್ನು ವಿವರಿಸಿದರು. ಗುಂಪು ಚರ್ಚೆಯನ್ನು ವಲಯ ಸಂಯೋಜಕ ರಾದ ರೋ.ಹೇಮಂತ್ ಯು.ಕಾಂತ್ ಮತ್ತು ರೋ.ಡಾ.ವಿರುಪಾಕ್ಷದೇವರ ಮನೆಯವರು ನಡೆಸಿಕೊಟ್ಟರು.ರೋಟರಾಕ್ಟ ಮಣಿಪಾಲದ ಸದಸ್ಯರು ರೋಟರಿ ಕ್ವಿಜ್ ನಡೆಸಿದರು. ಸಮಾರೋಪ ಸಮಾರಂಭದಲ್ಲಿ ರೋಟರಿ ಸಭಾಪತಿ ರೋ.ಕೃಷ್ಣ ಕಾಂಚನ್ ರವರು ಸಮಾರೋಪ ಭಾಷಣ ಮಾಡಿದರು. ಸಮಾರಂಭದಲ್ಲಿ ವಲಯ ಸೇನಾನಿಗಳಾದ ರೋ.ರಾಜೇಶ್ ಡಿ.ಪಾಲನ್, ರೋ.ಬಾಲಕೃಷ್ಣ ಕುಮಾರ್, ರೋ.ದಯಾನಂದ ನಾಯಕ್ ಉಪಸ್ಥಿತರಿದ್ದರು.ರೋ.ಜನಾರ್ದನ ಭಟ್ ಮತ್ತು ರೋ. ಅಶೋಕ ಕೋಟ್ಯಾನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯದರ್ಶಿಗಳಾದ ರೋ. ಗುರುರಾಜ್ ಭಟ್ ಮತ್ತು ರೋ.ಶಶಿಕಲಾರಾಜವರ್ಮ ಅರಿಗ ಅವರು ದನ್ಯವಾದ ಅರ್ಪಿಸಿದರು.