ತೆಕ್ಕಟ್ಟೆ ರೋಟರಿ ಕ್ಲಬ್ ಪದಗ್ರಹಣ ಕಾರ್ಯಕ್ರಮ

ಕೋಟ: ರೋಟರಿ ಕ್ಲಬ್ ತೆಕ್ಕಟ್ಟೆ ಇದರ 2022-23ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಇತ್ತೀಚಿಗೆ ಕುಂಭಾಶಿ ಗಾಯತ್ರಿ ಸಭಾಭವನದಲ್ಲಿ ನಡೆಯಿತು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಮಣೂರು ಶ್ರೀ ಮಹಾಲಿಂಗೇಶ್ವರ ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಇವರನ್ನು ಸನ್ಮಾನಿಸಲಾಯಿತು.
ಕಲ್ಮಾಡಿಯ ಸಿಬಿಎಸ್‌ಇ ಸ್ಕೂಲ್‌ನ ಪ್ರಾಂಶುಪಾಲ ಯಕ್ಷಗಾನ ಪ್ರಸಂಗಕರ್ತ ಪ್ರೊ| ಪವನ್ ಕಿರಣ್‌ಕೆರ ರೋಟರಿ ವಲಯ ಸೇನಾನಿ ಡಾ| ಗಣೇಶ್, ಯು. ನಿರ್ಗಮನ ಅಧ್ಯಕ್ಷ ಮಂಜುನಾಥ ಕಾಂಚನ್, ನಿರ್ಗಮನ ಕಾರ್ಯ ರ್ದ ರಾಘವೇಂದ್ರ ದೇವಾಡಿಗ, ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ಆಶಾ ಸಂತೋಷ್, ನವೀನ ವಿ.ಶೆಟ್ಟಿ, ಆಯುಷ್ ಪಿಎಚ್ ಎಫ್ ರಾಜೀವ ಶೆಟ್ಟಿ ಮಲ್ಯಾಡಿ ,ಮಾಲಾಡಿ ವಿಶ್ವನಾಥ ಶೆಟ್ಟಿ, ಪಿಎಚ್ ಎಫ್ ಸುರೇಶ್ ತೆಕ್ಕಟ್ಟೆ ಬೇಳೂರು, ಭೋಜರಾಜ ಮೊಗವೀರ, ಟಿ.ಶ್ರೀಯಾನ್, ಶ್ರೀಧರ್ ಆಚಾರ್, ಕುಮಾರ್, ಸತೀಶ್ ಶೆಟ್ಟಿ, ಹರಿಯ ಮಾಸ್ತರ್, ರಾಜಗೋಪಾಲ್ ಪುರಾಣಿಕ್ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply