ತೊಂಭಟ್ಟು -ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಜಂಟಿ ಹೊರಾಂಗಣ ಸಭೆ

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇವರ ಸಾರಥ್ಯದಲ್ಲಿ ರೋಟರಿ ಕ್ಲಬ್ ಸಿದ್ದಾಪುರ ಹಾಗೂ ರೋಟರಿ ಕ್ಲಬ್ ಶಂಕರನಾರಾಯಣ ಇವರೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ತೊಂಭಟ್ಟು, ಇದರ ಸಭಾಂಗಣದಲ್ಲಿ ಜಂಟಿ ಹೊರಾಂಗಣ ಸಭೆಯನ್ನು ಆಯೋಜಿಸಲಾಯಿತು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಉಪಾಧ್ಯಕ್ಷೆ ಸುಲತಾ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ವಾಸುದೇವ ಅಡಿಗ ಮತ್ತು ಶಾರದಮ್ಮ ದಂಪತಿಗಳು ಮತ್ತು ನವೀನ್‌ಚಂದ್ರ ಹೆಗ್ಡೆ ಇವರುಗಳನ್ನು ಗೌರವಿಸಲಾಯಿತು.
ರೋಟರಿ ವಲಯ ೧ರ ಸಹಾಯಕ ಗವರ್ನರ್ ಜಯಪ್ರಕಾಶ ಶೆಟ್ಟಿ ವೈ. ವಲಯ ೨ರ ಸಹಾಯಕ ಗವರ್ನರ್ ರೊ. ಧನಂಜಯ ಪ್ರಭು ಕೆ. ಮತ್ತು ವಲಯ ೩ರ ಸಹಾಯಕ ಗವರ್ನರ್ ಕೆ. ಪದ್ಮನಾಭ ಕಾಂಚನ್, ರೋಟರಿ ಶಂಕರನಾರಾಯಣದ ಅಧ್ಯಕ್ಷ ಎ. ಪಿ. ಬಾಯರಿ ,ಸಿದ್ದಾಪುರ ರೋಟರಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ನಾಗೇಂದ್ರ ಯಡಿಯಾಳ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply