ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ಮಂಗಳವಾರ ಉಡುಪಿಯ ಉದ್ಯಾವರದ 65 ಆಟೋ ಚಾಲಕರಿಗೆ ಖಾಕಿ ವಸ್ತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ, ಅಮೃತಾ ಕೃಷ್ಣಮೂರ್ತಿ ಮತ್ತು ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಆಚಾರಿ, ವಿಜಯ್ ಪುತ್ರನ್, ತಾಲೂಕು ಅಧ್ಯಕ್ಷರಾದ ಶ್ರೀ ಹರೀಶ್ ಅಮೀನ್, ಜಿಲ್ಲಾ ಸದಸ್ಯರುಗಳಾದ ಶ್ರೀನಿವಾಸ್ ಕಪ್ಪೆಟ್ಟು ಮತ್ತು ಉದ್ಯಾವರ ನಿಲ್ದಾಣದ ಸತೀಶ್ ಕೇದಾರ್, ದಿನೇಶ್ ಪೂಜಾರಿ, ಸತೀಶ್ ಅಮೀನ್, ಗಣೇಶ್ ಕೋಟ್ಯಾನ್, ಹಾಗು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.