ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ ಅವಶ್ಯ ವಸ್ತುಗಳ ಹಸ್ತಾಂತರ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ ಉದ್ಯಾವರ ಕೊರಂಗ್ರಪಾಡಿ ಒಬ್ಬಂಟಿ ಮಹಿಳೆ ಸುಶೀಲಾರವರು ಮನೆಗೆ ಹೊಂದಿಸಲು ಎರಡು ಟಾರ್ಪಲ್, ಅಡುಗೆ ಪಾತ್ರೆಗಳ ಕಿಟ್, ಬಕೇಟ್, ಬೆಡ್ ಶೀಟ್ ನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಸಭಾಪತಿ ಡಾ ತಲ್ಲೂರು ಶಿವರಾಮ ಶೆಟ್ಟಿಯವರು ಹಸ್ತಾಂತರಿಸುತ್ತಾ, ಪತಿ ಮತ್ತು ಮಗನನ್ನು ಕಳೆದುಕೊಂಡು ಒಬ್ಬಂಟಿ ಜೀವನ ಸಾಗಿಸುವ ಸುಶೀಲಾ ರವರಿಗೆ ಇತರ ಸಂಘ ಸಂಸ್ಥೆಗಳು ಸಹಾಯಹಸ್ತ ನೀಡಲು ಮುಂದೆ ಬರಲಿ ಎಂದುರು.

ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಡಿಡಿಆರ್ ಸಿ ಸಿಬ್ಬಂದಿ ಅನುಷಾ ಆಚಾರ್ಯ, ರೆಡ್ ಕ್ರಾಸ್ ಸಿಬ್ಬಂದಿ ಸುನಿತಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply