ಉಡುಪಿ ಅಂಚೆ ವಿಭಾಗ ಹಾಗೂ ಪ್ರಗತಿ ಫ್ರೆಂಡ್ಸ್ ಪಟ್ಲ- ಹಿರೇಬೆಟ್ಟು ಇದರ ಸಹಯೋಗದೊಂದಿಗೆ ಶ್ರೀ ಗಣೇಶ ಗೇರುಬೀಜ ಕಾರ್ಖಾನೆ ಪಟ್ಲದಲ್ಲಿ ಅಂಚೆ ಆಧಾರ್ ಶಿಬಿರ

ಉಡುಪಿ ಅಂಚೆ ವಿಭಾಗ ಹಾಗೂ ಪ್ರಗತಿ ಫ್ರೆಂಡ್ಸ್ ಪಟ್ಲ- ಹಿರೇಬೆಟ್ಟು ಇದರ ಸಹಯೋಗದೊಂದಿಗೆ ಶ್ರೀ ಗಣೇಶ ಗೇರುಬೀಜ ಕಾರ್ಖಾನೆ ಪಟ್ಲದಲ್ಲಿ ಅಂಚೆ ಆಧಾರ್ ಶಿಬಿರವನ್ನು ಯಶಸ್ವೀಯಾಗಿ ಆಯೋಜಿಸಲಾಯಿತು. 

ಶಿಬಿರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಆಧಾರ್ ನೊಂದಣಿ ಮತ್ತು ತಿದ್ದುಪಡಿ ಸೇವೆ ಒದಗಿಸಲಾಯಿತಲ್ಲದೇ ಅಂಚೆ ಇಲಾಖೆಯ ವಿವಿಧ ಜನಪರ ಯೋಜನೆಗಳ ಸೌಲಭ್ಯ ಸ್ಥಳದಲ್ಲೇ ಕಲ್ಪಿಸಲಾಯಿತು. 
ಅಂಚೆ ಅಧೀಕ್ಷಕ ಶ್ರೀ ನವೀನ್ ಚಂದರ್ ರವರ ನೇತ್ರತ್ವದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ ಕೃಷ್ಣರಾಜ‌ ಭಟ್, ಶ್ರೀ ಧನಂಜಯ ಆಚಾರ್  ಮತ್ತು ಅಂಚೆ ಇಲಾಖಾ ಸಿಬ್ಬಂದಿಗಳು ಈ ಜನಸ್ನೇಹಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರಲ್ಲದೇ, ಪ್ರಗತಿ ಫ್ರೆಂಡ್ಸ್ ನ ವಿವಿಧ ಪದಾಧಿಕಾರಿಗಳು ಶಿಬಿರದ ವ್ಯವಸ್ಥಿತ ನಿರ್ವಹಣೆಯಲ್ಲಿ ಸಹಕರಿಸಿದರು.
 
 
 
 
 
 
 
 
 
 
 

Leave a Reply