ರೋಟರಿ ಉಡುಪಿ, ಚೈಲ್ಡ್ ಲೈನ್ ಉಡುಪಿ, ಶ್ರೀ ಕೃಷ್ಣ ರೋಟರಾಕ್ಟ ಕ್ಲಬ್, ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟಕ್ಲಬ್ ವತಿಯಿಂದ ವಿಶ್ವಪರಿಸರ ದಿನಾಚರಣೆ. 

ಚೈಲ್ಡ್ ಲೈನ್ ಉಡುಪಿ, ರೋಟರಿ ಉಡುಪಿ, ಶ್ರೀ ಕೃಷ್ಣ ರೋಟರಾಕ್ಟ ಕ್ಲಬ್, ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟಕ್ಲಬ್ ಗಳೊಂದಿಗೆ ವಿಶ್ವ ಪರಿಸರ ದಿನವನ್ನು ಶ್ರೀ ಕೃಷ್ಣ ಬಾಲನಿಕೇತನ ಕುಕ್ಕಿಕಟ್ಟೆ, ಉಡುಪಿ ಇಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಯ್ತು.

ಚೈಲ್ಢ ಲೈನ್ ನಿರ್ಧೇಶಕ ರೋ.ರಾಮಚಂದ್ರ ಉಪಾದ್ಯಾಯ ವಿಶ್ಬ ಪರಿಸರದಿನದ ಮಹತ್ವವನ್ನು ವಿವರಿಸಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಎಲ್ಲರ ಸಹಬಾಗಿತ್ವದ ಅವಶ್ಯಕತೆಬಗ್ಗೆ ತಿಳಿಸಿ ಪರಿಸರ ಉಳಿಸಿಬೆಳೆಸುವ ಸಂಕಲ್ಪ ತೊಡುವಂತೆ ಕರೆ ನೀಡಿದರು.

ರೋಟರಿ ಅಧ್ಯಕ್ಷೆ ರೋ. ರಾಧಿಕಾ ಲಕ್ಷ್ಮೀನಾರಾಯಣ ಅವರು ಬಾಲನಿಕೇತನದ ಮಕ್ಕಳಿಗೆ ಚ್ಯವನಪ್ರಾಶ ಮತ್ತು ಬಿಸ್ಕತನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ, ರೋ.ದೀಪಾ ಭಂಡಾರಿ, ರೋಟರಿ ಜಿಲ್ಲಾ ಕಾರ್ಯದರ್ಶಿ ರೋ.ಡಾ.ಸುರೇಶ್ ಶೆಣೈ, ರೋ.ದಿನೇಶ್ ಭಂಡಾರಿ, ರೋ.ಸುಬ್ರಹ್ಮಣ್ಯ ಕಾರಂತ, ರೋ.ಗುರುರಾಜ ಭಟ್.ರೋಟರಾಕ್ಟ ಅಧ್ಯಕ್ಷೆ ರೋ.ಶೃತಿ ಶೆಣೈ, ರೋ.ಆದಿತ್ಯ ಹೆಬ್ಬಾರ್, ಚೈಲ್ಡ್ ಲೈನ್ ಸಂಯೋಜಕಿ ಕು.ಕಸ್ತೂರಿ, ಕು.ಜ್ಯೋತಿ, ಕು.ತ್ರಿವೇಣಿ, ಕು.ನಯನ, ಕು.ಸುನೀತ, ಶ್ರೀ ಕೃಷ್ಣ ಬಾಲನಿಕೇತನದ ಕು.ಶಕುಂತಲಾ, ಕು.ಶಿವಲೀಲಾ ಮುಂತಾದವರು ಬಾಗವಹಿಸಿದ್ದರು.

 
 
 
 
 
 
 
 
 
 
 

Leave a Reply