ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ 2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ‘ವಿಜಯವಾಣಿ’ ಪತ್ರಿಕೆಯ ಶ್ರವಣ ಕುಮಾರ್ ನಾಳ, ಕಾರ್ಯದರ್ಶಿಯಾಗಿ ‘ಹೊಸ ದಿಗಂತ’ ಪತ್ರಿಕೆಯ ಐ.ಬಿ. ಸಂದೀಪ್ ಕುಮಾರ್ ಐ.ಬಿ. ಸಂದೀಪ್ ಕುಮಾರ್ ಕಾರ್ಯದರ್ಶಿ ಅವಿರೋಧ ಆಯ್ಕೆಯಾಗಿದ್ದಾರೆ.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅವರ ಅಧ್ಯಕ್ಷತೆಯಲ್ಲಿ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ಉಪಾಧ್ಯಕ್ಷ ಸರ್ವೇಶ್ ಕುಮಾರ್ , ಅನೀಶ್ ಕುಮಾರ್ ಮರೀಲ್, ಜತೆ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್, ಮತ್ತು ಬಳಿಕ ಕೋಶಾಧಿಕಾರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೃಷ್ಣಪ್ರಸಾದ್ ಆಯ್ಕೆಯಾಗಿದ್ದಾರೆ. ಪತ್ರಕರ್ತರ ಸಂಘದ ಮೆನೇಜರ್ ಆಗಿ ಪ್ರವೀಣ್ ಬೊಳುವಾರು ಮುಂದುವರಿದಿದ್ದಾರೆ.
ತುಳು ಭಾಷೆ ಬಗ್ಗೆ ವಿಶೇಷ ಒಲವಿರುವ ನಾಳ ರವರು ಅಧಿಕಾರ ಸ್ವೀಕರಿಸಿದ ಕೂಡಲೇ ಪತ್ರಕರ್ತರ ಸಂಘದ ಬೋರ್ಡ್ ನ್ನು ತುಳು ಲಿಪಿಯಲ್ಲಿ ಬರೆಸುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ.