ಮೂಡುಬಿದಿರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಡಬಿದ್ರೆ ವಲಯದ ಆಶ್ರಯದಲ್ಲಿ, ಮೂಡಬಿದ್ರೆ ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಎಸ್.ಕೆ.ಪಿ.ಎ ಸದಸ್ಯರಿಗಾಗಿ ಅಂತರ್ ವಲಯ ” ಮಾಡೆಲಿಂಗ್ ಫೋಟೋಗ್ರಫಿ ಸ್ಪರ್ಧೆ 2021″ ನಡೆಯಿತು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಛಾಯಾಗ್ರಹಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಕೋವಿಡ್ ಸಂದರ್ಭದಲ್ಲಿ ವಿಪರೀತ ಕಷ್ಟ ನಷ್ಟ ಅನುಭವಿಸಿದ ಛಾಯಾಗ್ರಾಹಕರಿಗೆ ಮುಂದಿನ ದಿನಗಳು ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ರಿ. ಇದರ ಜಿಲ್ಲಾಧ್ಯಕ್ಷ ಶ್ರೀ ಶ್ರೀಧರ್ ಶೆಟ್ಟಿಗಾರ್, ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಡಾ. ಕೃಷ್ಣ ಮೋಹನ್ ಪ್ರಭು, ಎಸ್.ಕೆ.ಪಿ.ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ ಅಡ್ಯಾರ್, ಮಾಡೆಲ್ ಶ್ರೇಯಾ ಮಾರ್ಲ ಉಪಸ್ಥಿತರಿದ್ದರು.ವಲಯ ಅಧ್ಯಕ್ಷ ರವಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಲಯ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿ, ದಶಮಾನೋತ್ಸವ ಸಮಿತಿಯ ಸಂಚಾಲಕ ವಿಲ್ಫ್ರೆಡ್ ಮೆಂಡೊನ್ಸಾ ವಂದಿಸಿದರು.