4 ಕಂದಾಯ ಜಿಲ್ಲೆಯನ್ನೊಳಗೊಂಡ ಲಯನ್ಸ್ ಜಿಲ್ಲೆ 317 ಸಿ ಇದರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ವೈಭವ ‘ಪಂಚಮಿ’ಯ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಎನ್ ಎಮ್ ಹೆಗಡೆ ಉದ್ಘಾಟಿಸಿದರು.
ತುಳು ಚಿತ್ರರಂಗದ ನಟ ಅರವಿಂದ ಬೋಳಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಥಮ ಉಪ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ ಸಿ ವೀರಭದ್ರ ಮಾಜಿ ಜಿಲ್ಲಾ ಗವರ್ನರ್ ಶ್ರೀಧರ ಶೇಣವ, ಪ್ರಥಮ ಮಹಿಳೆ ಸಂದ್ಯಾ ಎನ್ ಹೆಗಡೆ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರಾದ ವೈಜಯಂತಿ ಕಾರಂತ್ , ಹರಿ ಪ್ರಸಾದ್ ರೈ,ವರುಣ್ ಶೆಟ್ಟಿ ರವಿರಾಜ್ ಯು ಎಸ್, ರಾಜೇಶ್ ಹೆಗ್ಡೆ.
ಲಯನ್ಸ್ ಪದಾಧಿಕಾರಿಗಳಾದ ರಂಜನ್ ಕಲ್ಕೂರ,ಸಾಧನ ಕಿಣಿ,ರವಿರಾಜ್ ನಾಯಕ್,ಸಪ್ನಾ ಸುರೇಶ್, ಗಿರಿಜಾ ಶಿವರಾಮ್ ಶೆಟ್ಡಿ, ವಿಜಯಾ ಬಂಗೇರ, ಜ್ಯೋತಿ ಶೇಣವ, ರಾಜೇಶ್ ಹೆಗ್ಡೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಜಿಲ್ಲೆಯ 26 ಕ್ಲಬ್ಗಳು ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.