‘ಲಾ ಇನ್ ಆ್ಯಕ್ಷನ್’ ಸಂಸ್ಥೆಯ ವತಿಯಿಂದ ರಿಕ್ಷಾ ಚಾಲಕರಿಗೆ ಆಹಾರ ಕಿಟ್ ವಿತರಣೆ

ಉಡುಪಿ : ಜಿಲ್ಲೆಯ ಪ್ರಖ್ಯಾತ ನ್ಯಾಯವಾದಿ ಸಂಕಪ್ಪ ಎ. ರವರ ‘ಲಾ ಇನ್ ಆ್ಯಕ್ಷನ್’ ಸಂಸ್ಥೆಯ ವತಿಯಿಂದ ಕೊರೋನಾ ಸಂಕಷ್ಟದ ಸಮಯದಲ್ಲಿ ಸಂತೆಕಟ್ಟೆಯ 90 ರಿಕ್ಷಾ ಚಾಲಕರಿಗೆ ಆಹಾರ ಕಿಟ್ ನ್ನು ಇಂದು ವಿತರಿಸಲಾಯಿತು. 

ರಿಕ್ಷಾ ಚಾಲಕರಿಗೆ ದಿನಸಿ ವಸ್ತುಗಳ ಕಿಟ್ ಗಳನ್ನು ಹಸ್ತಾಂತರಿಸಿದ ಸಂಸ್ಥೆಯ ಪ್ರವರ್ತಕ ನ್ಯಾಯವಾದಿ ಮತ್ತು ನೋಟರಿ ಸಂಕಪ್ಪ.ಎ ಅವರು ಮಾತನಾಡಿ,ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ,ಕಷ್ಟದಲ್ಲಿರುವ ಅನೇಕ ಕುಟುಂಬಗಳಿಗೆ ಸಂಸ್ಥೆ ವತಿಯಿಂದ ನೆರವು ನೀಡುತ್ತಾ ಬಂದಿದ್ದು,ಈ ಬಾರಿ ರಿಕ್ಷಾ ಚಾಲಕರಿಗೆ ನೆರವು ನೀಡಬೇಕು ಎಂಬ ದೃಷ್ಟಿಯಿಂದ, ದೊಡ್ಡ ಸಂಖ್ಯೆಯಲ್ಲಿರುವ ಸಂತೆಕಟ್ಟೆಯ ರಿಕ್ಷಾ ಚಾಲಕರಿಗೆ ದಿನಸಿ ವಸ್ತುಗಳ ಕಿಟ್ ಗಳನ್ನು ನೀಡಲಾಗುತ್ತಿದೆ.ಸಾರ್ವಜನಿಕ ಸೇವೆಯಲ್ಲಿರುವ ನಾವು, ಸಾರ್ವಜನಿಕರಿಗೆ ಸೇವೆ ನೀಡುವುದು ನಮ್ಮ ಉದ್ದೇಶ ಎಂದರು.  

ಸಂಸ್ಥೆಯು ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿಯೂ ಸಂಕಷ್ಟದಲ್ಲಿದ್ದವರಿಗೆ 3 ಲಕ್ಷಕ್ಕೂ ಅಧಿಕ ಮೊತ್ತದ ದಿನಸಿ ವಸ್ತುಗಳನ್ನು ವಿತರಿಸಿತ್ತು. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಕಷ್ಟ ಕಾಲದಲ್ಲಿ ಸದಾ ನೆರವಾಗಲು ಸಂಸ್ಥೆ ಬದ್ದರಾಗಿರುವುದು ಎಂದು ನ್ಯಾಯವಾದಿ ಸಂಕಪ್ಪ ಎ ತಿಳಿಸಿದರು.ಸಂಸ್ಥೆಯ ಗೌರವಾಧ್ಯಕ್ಷ ಶೇಖರ್ ಬೈಕಾಡಿ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರತ್ನಾಕರ ನಾಯ್ಕ ಮತ್ತು ಪದಾಧಿಕಾರಿಗಳು, ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply