ಕೆಎಸ್ ವಿಪಿವಿಎ ನಿಯೋಗದಿಂದ ಖ್ಯಾತ ಛಾಯಾಗ್ರಾಹಕ ಬಾಬು ಜಿ ಎಸ್ ರವರ ಭೇಟಿ

ಕೆಎಸ್ ವಿಪಿವಿಎ ಪದಾಧಿಕಾರಿಗಳು  ಗೌರವ ಸಲಹೆಗಾರರಾದ  ಬಾಬು ಜಿ ಎಸ್ ಅವರೊಂದಿಗೆ ಸಂಘಟನೆಯ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ಪದಾಧಿಕಾರಿಗಳಾದ ರಮೇಶ್, ರಾಮಮೂರ್ತಿ ಉಪಾಧ್ಯ, ರಘು ಎಸ್,  ಶ್ರೀ ಸುದಿರ್ ಹೆಬ್ಬಾರ್ ರವರು ಮೈಸೂರಿನಲ್ಲಿ ಭೇಟಿಯಾದರು
ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ, ಉಪಯುಕ್ತ ಸಲಹೆಗಳನ್ನು ಬಾಬುರವರು ನೀಡಿದರು. ಮೈಸೂರಿನ ರಾಘ ಫೋಟೋ ಸ್ಟುಡಿಯೋದಲ್ಲಿ ನಡೆದ ಸಭೆಯಲ್ಲಿ ಮೈಸೂರು ವಲಯ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಸಂಘಟನೆಯ ಸದಸ್ಯರು ಹಾಗೂ ಹಿರಿಯ  ಛಾಯಾಗ್ರಾಹಕ ಲಕ್ಷ್ಮಿನಾರಾಯಣ ಅವರು ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಾಬು ಜಿ ಎಸ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
 
 
 
 
 
 
 
 
 
 
 

Leave a Reply