ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 225 ನೇಯ ಜಯಂತ್ಯೋತ್ಸವ ಪ್ರಯುಕ್ತ ರಾಯಣ್ಣನ ಭಾವಚಿತ್ರ ಮೆರವಣಿಗೆ ಕುಂಭ ಕಲಶ, ಚಂಡೆ ವಾದನದೊಂದಿಗೆ ಮೆರವಣಿಗೆ ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ನಿಂದ ಸಾಗಿ ಬಂದು ಆದಿ ಉಡುಪಿಯ ರಿಗಲ್ ನೆಕ್ಸ್ಟ್ ಕಟ್ಟಡದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಕೇಂದ್ರ ಕಛೇರಿಯವರೆಗೆ ಸಾಗಿ ಬಂತು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಉಡುಪಿ ಶಾಖೆಯ ಮುಖ್ಯಸ್ಥ ಹಫೀಜ್ ರೆಹಮಾನ್ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ರಾಘವೇಂದ್ರ ನಾಯಕ್, ಪೂರ್ಣಿಮಾ ಜನಾರ್ದನ್, ಉಮಾ ಸಿದ್ಧಬಸಯ್ಯ, ಸವಿತಾ ನೋಟಗಾರ್.
ಕರಾವಳಿ ಕುರುಬರ ಸಂಘ ಮಂಗಳೂರು ಇದರ ಅಧ್ಯಕ್ಷ ಮಂಜುನಾಥ ವೈ ನೋಟಗಾರ, ಲಕ್ಷ್ಮಣ್ ಕೋಲ್ಕಾರ್, ಮಹೇಶ್ ಗುಂಡಿಬೈಲು, ಕುಮಾರ್ ಪ್ರಸಾದ್, ವಿಠ್ಠಲ್, ರಮೇಶ್ ಎಂಜಿಎಂ, ಶರಣಪ್ಪ ಎಂಜಿಎಂ, ಗಣೇಶ್ ಪಾತ್ರೋಟಿ, ಹನುಮಂತರಾಯ ಪೂಜಾರಿ, ಸಿದ್ದು ಪೂಜಾರಿ ಉಪಸ್ಥಿತರಿದ್ದರು.