ವಿಕಲಚೇತನರು, ರೋಗಿಗಳಿಗೆ ಆಹಾರ ಸಾಮಾಗ್ರಿ ವಿತರಣೆ: ಮುಂಬೈ ಉದ್ಯಮಿ ಸಹಕಾರ

ಉಡುಪಿ : ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ವಿಕಲಚೇತನರು ಹಾಗೂ ತೀರಾ ಅನಾರೋಗ್ಯದ ಸ್ಥಿತಿಯಲ್ಲಿ ಮನೆಯಲ್ಲಿ ದಿನಕಳೆಯುತ್ತಿರುವ 22 ಮಂದಿಗೆ 20 ಕೆ.ಜಿ ಅಕ್ಕಿ ಹಾಗೂ ದಿನಬಳಕೆಯ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಬುಧವಾರ ವಿತರಿಸಿದರು. ವಿಕಲಚೇತನರ ಸಂಘದ ಉಪಾಧ್ಯಕ್ಷ ಜಗದೀಶ್ ಭಟ್ ಉಪಸ್ಥಿತರಿದ್ದರು. 

ಫಲಾನುಭವಿಗಳೆಲ್ಲರೂ ಸ್ವಾಲಂಬಿಯ ಬದುಕು ಸಾಗಿಸುತ್ತಿದ್ದವರು.ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ದುಡಿಮೆ ಇಲ್ಲದೆ ಎಲ್ಲರಿಗೂ ಅಸಹಾಯಕತೆ ಪರಿಸ್ಥಿತಿ ಎದುರಾಗಿತ್ತು. ವಿಷಯ ತಿಳಿದು ವಿಶು ಶೆಟ್ಟಿ 45 ಸಾವಿರ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಕಟಪಾಡಿ ಮೂಡುಬೆಟ್ಟು ಮೂಲದ ಮುಂಬೈ ಉದ್ಯಮಿ ಕಿರಣ್ ಶೆಟ್ಟಿ ಅವರು 25 ಸಾವಿರ ದೇಣಿಗೆ ನೀಡಿ ಸಹಕರಿಸಿದರು.

 
 
 
 
 
 
 
 
 
 
 

Leave a Reply