ಉಡುಪಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲೆ ಸಂಸ್ಥೆ ಉಡುಪಿಯ ಜಿಲ್ಲಾ ಖಜಾಂಚಿ ದೇವ ಆನಂದ ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಹಲವು ದಾನಿಗಳಿಂದ ಸುಮಾರು 30 ಖಾಸಗಿ ಶಾಲೆಯ ಸ್ಕೌಟ್ ಗೈಡ್ಸ್ ಶಿಕ್ಷಕರಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಭಾನುವಾರ ಒದಗಿಸಲಾಯಿತು.
ಇದನ್ನು ರೋಟರಿ ಸಂಸ್ಥೆಯ ಪದಾಧಿಕಾರಿಗಳ ಸಮೂಹದಲ್ಲಿ ಜಿಲ್ಲಾ ಸಂಸ್ಥೆಗೆ ಹಸ್ತಾಂತರಿಸಿದರು .ಜಿಲ್ಲಾ ಕಾರ್ಯದರ್ಶಿ ಶ್ರೀ ವೇಣುಗೋಪಾಲ್ ಹೆಬ್ಬಾರ್ ಜಿಲ್ಲಾ ಸ್ಕೌಟ್ ಕಮೀಷನರ್ ಡಾಕ್ಟರ್ ವಿಜಯೇಂದ್ರ ವಸಂತರಾವ್ ಹಾಗೂ ಜಿಲ್ಲಾ ಸಂಘಟಕರು ಉಪಸ್ಥಿತರಿದ್ದರು.