ಮುಖ್ಯ ಅತಿಥಿ ಉಡುಪಿ ನಗರ ಠಾಣೆ ಅಧಿಕಾರಿ ಪ್ರಮೋದ್ ಕುಮಾರ್ ಮಾತನಾಡಿ ಕೋವಿಡ್ ರೋಗ ಮುಕ್ತ ವಾರ್ಡ್ ಮಾಡಲು ಸರ್ವರ ಸಹಕಾರ ಮುಖ್ಯ. ಇಲಾಖೆ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಶಿರಬೀಡು ನಗರಸಭಾ ಸದಸ್ಯ ಟಿ ಜಿ ಹೆಗಡೆ ಮಾತನಾಡಿ ಕೋವಿಡ್ ಪಾಸಿಟಿವ್ ಇರುವ ಮನೆ /ಫ್ಲಾಟ್ ಗಳನ್ನೂ ಸೀಲ್ ಡೌನ್ ಬಗ್ಗೆ ತೀರ್ಮಾನಿಸಲಾಯಿತು.
ವೇದಿಕೆ ಯಲ್ಲಿ ಡಾ ಹೇಮಂತ್, ಎ ಎಸ್ ಐ ವಾಸಪ್ಪ ನಾಯ್ಕ್, ಶಶಿಧರ್ ಹಾಗು ಸುರೇಶ ಶೇರಿಗಾರ, ಮಹೇಶ್ ಪೂಜಾರಿ, ಉದಯ ಮಠದಬೆಟ್ಟು, ಹರೀಶ್ ರಾಮ್, ವಿವಿಧ ಇಲಾಖೆಯ ಸಿಬ್ಬಂಧಿ, ವಾರ್ಡ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.