ಕೊಡವೂರು ಬ್ರಾಹ್ಮಣ ಮಹಾ ಸಭಾ- ಸ್ಮರಣ ಸಂಚಿಕೆ ” ರಜತ ಸ್ಮೃತಿ” ಬಿಡುಗಡೆ…

ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ರಜತ ಮಹೋತ್ಸವದ ಸವಿನೆನಪಿನಲ್ಲಿ ” ರಜತ ಸ್ಮೃತಿ ” ಎಂಬ ಸ್ಮರಣ ಸಂಚಿಕೆಯ ಸಾಂಕೇತಿಕ ಬಿಡುಗಡೆಯನ್ನು ಪೇಜಾವರ ಮಠಾಧೀಶ ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರು ನಡೆಸಿಕೊಟ್ಟರು.ಸಾರ್ಥಕ ಇಪ್ಪತ್ತೈದು ವರ್ಷಗಳನ್ನು ಪೂರೈಸಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಪ್ರಸಿದ್ಧ ವಾಗಿರುವ ಕೊಡವೂರು ವಲಯದ ಬೆಳ್ಳಿ ಹಬ್ಬದ ರಜತ ಪಥದಲ್ಲಿ ವಿಪ್ರ ಹೆಜ್ಜೆಯನ್ನು ಗುರುತಿಸುವ ಮೂಲಕ ರಜತ ಸ್ಮೃತಿ ಸ್ಮರಣ ಸಂಚಿಕೆಯನ್ನು ಕೊಡವೂರು ಬ್ರಾಹ್ಮಣ ಮಹಾ ಸಭಾದ ವಿಪ್ರಶ್ರೀ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಕರ್ಣಾಟಕ ಬ್ಯಾಂಕ್ ವಿಭಾಗೀಯ ಕಚೇರಿಯ ಸಹಾಯಕ‌ ವ್ಯವಸ್ಥಾಪಕ ರಾಜಗೋಪಾಲ ಭಟ್ , ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ, ಕೊಡವೂರು ಬ್ರಾಹ್ಮಣ ಮಹಾ ಸಭಾದ ಗೌರವಾಧ್ಯಕ್ಷರಾದ ಪಿ.ಗುರುರಾಜ್ ರಾವ್,ಗೋವಿಂದ ಐತಾಳ್ , ಅಧ್ಯಕ್ಷರಾದ ನಾರಾಯಣ ಬಲ್ಲಾಳ್, ಕಾರ್ಯದರ್ಶಿ ಶ್ರೀನಿವಾಸ ಬಾಯರಿ,ರಜತ ಮಹೋತ್ಸವ ಕಾರ್ಯಾಧ್ಯಕ್ಷ ಮಂಜುನಾಥ ಭಟ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್,ನೂತನ ಅಧ್ಯಕ್ಷ ಶ್ರೀನಿವಾಸ ಉಪಾಧ್ಯಾಯ, ಸ್ಮರಣ ಸಂಚಿಕೆಯ ಮುಖ್ಯ ಸಂಪಾದಕಿ ಪೂರ್ಣಿಮಾ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply