ಆಪತ್ಬಾಂದವ ಅಸೀಫ್ ಅವರಿಗೆ ನೈತಿಕ ಬೆಂಬಲ ಕರವೇ ಘಟಕ ಉಡುಪಿ

ಮಾನ್ಯ ಕರವೇ ಸಂಘಟನೆಯ ರಾಜ್ಯಾಧ್ಯಕ್ಷರಾದ ಮಾನ್ಯ ಟಿ.ಎ.ನಾರಾಯಣ ಗೌಡರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಹಾಗೂ ತಾಲ್ಲೂಕು ಕರವೇ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ಕಳೆದ ಹತ್ತು ದಿನಗಳಿಂದ ಸುರತ್ಕಲ್ ಟೋಲ್ ಇದರ ಅಕ್ರಮದ ಬಗ್ಗೆ ಏಕೈಕ ವ್ಯಕ್ತಿಯಾಗಿ ಪ್ರತಿಭಟನೆ ಮಾಡುತ್ತಿರುವ ಆಪತ್ಬಾಂದವ ಅಸೀಫ್ ಅವರ ಹೋರಾಟಕ್ಕೆ ನೈತಿಕ ಬೆಂಬಲ ಹಾಗೂ ಅವರ ಉದ್ದೇಶಕ್ಕೆ ಬೆಂಬಲವಾಗಿ ಕರವೇ ಘಟಕ ಉಡುಪಿ ಜಿಲ್ಲೆಯಿಂದ ಭೇಟಿ ಹಾಗೂ ಬೆಂಬಲವನ್ನು ನೀಡಲಾಯಿತು. ಸುರತ್ಕಲ್ ಟೋಲ್ ಗೇಟ್ ವಿಚಾರವಾಗಿ ಆಪತ್ಬಾಂದವ ಆಸಿಫ್ ಇವರ ಟೋಲ್ ಗೇಟ್ ನ ಪ್ರತಿಭಟನೆ ನಿರ್ಮೂಲನೆಗೋಸ್ಕರ ಅವರ ಹೋರಾಟಕ್ಕೆ ಬೆಂಬಲವನ್ನು ನೀಡಲಾಯಿತು ಮಾತ್ರವಲ್ಲದೆ ಮುಂದಿನ ಹೋರಾಟದಲ್ಲಿ ನಾವು ಜೊತೆಗಿರುವೆವು ಎಂಬ ಧೈರ್ಯವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಉಡುಪಿ ಜಿಲ್ಲಾದ್ಯಕ್ಷರಾದ ಸುಜಯ ಪೂಜಾರಿ, ಮಹಿಳಾ ಜಿಲ್ಲಾದ್ಯಕ್ಷರು ಪ್ರೆಮಲತಾ
ಜಿಲ್ಲಾ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಫ್ರ್ಯಾಂಕಿ ಡಿ ಸೋಜ ಕೊಳಲಗಿರಿ ಜಿಲ್ಲಾ ಕಾರ್ಮಿಕ ಘಟಕದ ಅಧಕ್ಷರಾದ ದೇವರಾಜ್ ಎಂ. ಬಿ, ಕಾರ್ಮಿಕ ಘಟಕದ ಸಿದ್ದಣ್ಣ ಎಸ್ ಪೂಜಾರಿ ಮಹಿಳಾ ಘಟಕದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುಕ್ತ ಪ್ರಿಯ ಜಿಲ್ಲಾ ಮಹಿಳೆ ಘಟಕದ ಸಲಹೆಗಾರರಾದ ಶ್ರೀಮತಿ ಸುನಂದ, ಬ್ರಹ್ಮಾವರದ ಮಹಿಳಾ ಘಟಕದ ಅಧ್ಯಕ್ಷೆ ದೇವಕಿ ಜಿಲ್ಲಾ ಮಹಿಳಾ ಘಟಕದ ಸಹ ಕಾರ್ಯದರ್ಶಿಯಾದ ಅನುಷ, ಜಿಲ್ಲಾ ಸದಸ್ಯರಾದ ಪ್ರಭಾಕರ ಪೂಜಾರಿ ಪ್ರೀತಮ್, ಗೀತಾ ಪಾಂಗಾಳ, ನಿರ್ಮಲಾ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply