ಒಗ್ಗಟ್ಟಿನಲ್ಲಿ ಕೆಲಸ ಮಾಡಿದಾಗ ಯಶಸ್ಸು ಖಂಡಿತ. ಸಂಘಟನೆಯೊಂದಿಗೆ ನಾವು ಸೇರಿಕೊಂಡು ಕೆಲಸ ಕಾರ್ಯ ಮಾಡಿದರೆ, ಸಂಘಟನೆಯೊಂದಿಗೆ ನಾವು ಕೂಡಾ ಬೆಳೆಯುತ್ತೇವೆ ಎಂದು ನಿವೃತ್ತ ಶಿಕ್ಷಕ ಚಂದ್ರಶೇಖರ ಆಚಾರ್ಯ ಅಭಿಪ್ರಾಯ ಪಟ್ಟರು.
ಅವರು ಭಾನುವಾರದಂದು ಕಾಳಿಕಾಂಬಾ ಭಜನಾ ಸಂಘದ ನೂತನ ಭೋಜನ ಗ್ರಹವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅತ್ಯಂತ ಅವಶ್ಯವಾದ ಈ ಸಭಾಗ್ರಹ ದಾನಿಗಳ ನೆರವಿನಿಂದ ಭವ್ಯವಾಗಿ ಮೂಡಿ ಬಂದಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವಾಸುದೇವ ಆಚಾರ್ಯ ಹಾಗು ವರದ ದಂಪತಿಗಳನ್ನು ಅಭಿನಂದಿ ಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ್ ಕೊಡವೂರು, ಕೆ ಎಂ ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ,ಶ್ರೀಮತಿ ರತ್ನಾವತಿ ಜೆ ಬೈಕಾಡಿ, ಅಧ್ಯಕ್ಷ ಟಿ. ಕೃಷ್ಣ ಆಚಾರ್ಯ, ಅಪ್ಪಿ ಶಿವಯ್ಯ ಆಚಾರ್ಯ, ವಾರಿಜ ಎಂ ಆಚಾರ್ಯ ಉಪಸ್ಥಿತರಿದ್ದರು. ಉಮೇಶ್ ಜೆ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಧವ ಕೆ ಆಚಾರ್ಯ ಸ್ವಾಗತಿಸಿದರು. ನಿವೃತ್ತ ತಹಶೀಲ್ದಾರ ಮುರಳಿಧರ್ ಆಚಾರ್ಯ ವಂದನಾರ್ಪಣೆಗೈದರು