ಬ್ರಾಹ್ಮಣ ಮಹಾಸಭಾ ಇದರ ಅಧ್ಯಕ್ಷರಾಗಿ ಪ್ರೊ.ಸುಬ್ರಹ್ಮಣ್ಯ ಜೋಶಿ

ಬ್ರಾಹ್ಮಣ ಮಹಾಸಭಾ (ರಿ.) ಪುತ್ತೂರು ಇದರ ​2019-20ರ ವಾರ್ಷಿಕ ಮಹಾಸಭೆಯು ಅಕ್ಟೋಬರ್ ​18 ,2020 ಆದಿತ್ಯವಾರ ‘ಭಗವತೀ ಸಭಾಗೃಹ’ ಪುತ್ತೂರು ಇಲ್ಲಿ, ಮಹಾಸಭಾದ ಅಧ್ಯಕ್ಷರಾದ ಪ್ರೊ. ಸುಬ್ರಹ್ಮಣ್ಯ ಜೋಶಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯದರ್ಶಿ ಶ್ರೀ ಜಿ. ವಿ. ಆಚಾರ್ಯ ​2019-20ರ ವಾರ್ಷಿಕ ವರದಿ ಹಾಗೂ ಖಜಾಂಚಿ ಶ್ರೀ ವಿಜಯ್ ಕುಮಾರ್ ವೈ. ​2019-2020ರ ಲೆಕ್ಕಪತ್ರ ಮಂಡಿಸಿದರು.

​2020-2021 ಕ್ಕೆ ಶ್ರೀ ಸುಬ್ರಹ್ಮಣ್ಯ ಜೋಶಿ ಅಧ್ಯಕ್ಷರಾಗಿಯೂ ಜಿ.ವಿ.ಆಚಾರ್ಯ ಕಾರ್ಯದರ್ಶಿಯಾಗಿಯೂ, ವಿಜಯ್ ಕುಮಾರ್ ಖಜಾಂಚಿಯಾಗಿಯೂ ಪುನರಾಯ್ಕೆಯಾದರು. ಶ್ರೀಯುತ ವೈ. ಗಣೇಶ್ ಲೆಕ್ಕ ಪರಿಶೋಧಕರನ್ನಾಗಿ ಮುಂದು ವರಿಸಲು ನಿರ್ಧರಿಸಲಾಯಿತು. ಈ ಮಹಾಸಭೆಯಲ್ಲಿ ವಿದ್ಯಾನಿಧಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್, ಆ​​ಪತ್ಬಾಂಧವ ಸಮಿತಿಯ ಅಧ್ಯಕ್ಷರಾದ ನರಸಿಂಹ ಆಚಾರ್ಯ ಹಾಗೂ ಮಹಾಸಭಾದ ಸದಸ್ಯರು ಹಾಜರಿದ್ದರು.

 
 
 
 
 
 
 
 
 
 
 

Leave a Reply