ಜೆಸಿಐ ಕಲ್ಯಾಣಪುರ ​ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಜೆಸಿಐ ಕಲ್ಯಾಣಪುರ – ವಿಶ್ವ ಮಹಿಳಾ ದಿನಾಚರಣೆ ಉಚಿತ ಆರೋಗ್ಯ್ ತಪಾಸಣಾ ಹಾಗೂ ಮಾಹಿತಿ ಶಿಬಿರ . ಜೇಸಿಐ ಕಲ್ಯಾಣ್ಪುರದ ಮಹಿಳಾ ಜೆಸಿ, ಹಾಗೂ ಜೂನಿಯರ್ ಜೆಸಿ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಂಜೀವಿನಿ ಒಕ್ಕೂಟ ತೆಂಕನಿಡಿಯೂರು ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ದಿನಾಂಕ 8/3/2022 ರಂದು ತೆಂಕನಿಡಿಯೂರು ಸಮುದಾಯ ಭವನದಲ್ಲಿ ಮಹಿಳೆಯರಿಗೆ ಉಚಿತ ಅರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರದ ಉದ್ಘಾಟನೆಯನ್ನು Dr. ನಾಗಭೂಷಣ್ ಉಡುಪ ಎಚ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಉಡುಪಿ ಇವರು ಕಾರ್ಯಕ್ರಮ ಉದ್ಘಾಟಿಸಿ ಮಹಿಳೆಯರ ಸ್ಥಾನಮಾನ ಹಾಗೂ ಗೌರವದ ಬಗ್ಗೆ ಉತ್ತಮ ಶುಭ ನುಡಿಗಳನ್ನು ನೀಡಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿ ದಂತಹ ಹಿರಿಯ ವೈದ್ಯಾಧಿಕಾರಿ ಡಾಕ್ಟರ್ ಬಿಂದು ಗಣಪತಿ ಭಟ್ರವರಿಗೆ ಜೆಸಿ ವತಿಯಿಂದ ಸನ್ಮಾನ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುಬ್ರಮಣ್ಯ ಶೇರಿಗಾರ್ ಕರ್ನಾಟಕ ನೌಕರ ಸಂಘದ ಅಧ್ಯಕ್ಷರು, ವಲಯ 15ರ ವಲಯ ಸಂಯೋಜಕಿ ಜೆಸಿ ಜ್ಯೋತಿ ಪ್ರಶಾಂತ್, ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಜೆಸಿಐ ಕಲ್ಯಾಣಪುರದ ಅಧ್ಯಕ್ಷರಾದ ಜೆಸಿ ಜಯಶ್ರೀ ಮಿತ್ರ.

ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಸುಕನ್ಯಾ ಶೆಟ್ಟಿ, ಈ ಸಂದರ್ಭದಲ್ಲಿ ಜೆಸಿಐ ಕಲ್ಯಾಣಪುರದ ಪೂರ್ವ ಧ್ಯಕ್ಷರಾದ ಜೆಸಿ ವಿಜಯ್ ಸುವರ್ಣ, ಜೆಸಿ ಆಶಾ ಆಲನ್, ಮಹಿಳಾ ನಿರ್ದೇಶಕಿ ಜೆಸಿ ಅನಿತಾ ನರೇಂದ್ರ, ಕಾರ್ಯದರ್ಶಿ ಅನುಸೂಯಾ ಅನಿಲ್, ಜೂನಿಯರ್ ಜಿಸಿ ಅಧ್ಯಕ್ಷೆ ರೇಚಲ್ ಲುವಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ದೇಶಕಿ ಜೆಸಿ ಪ್ರೀತಿ ಗುಣ ಗುಣವರ್ಮ ರವರು ಧನ್ಯವಾದ ಅರ್ಪಿಸಿದರು.

 
 
 
 
 
 
 
 
 
 
 

Leave a Reply