ಉಡುಪಿ : ಜೇಸಿಐ ಉಡುಪಿ ಸಿಟಿ ಪದಪ್ರಧಾನ ಸಮಾರಂಭ

ಉಡುಪಿ :- ಜೇಸಿಐ ವಲಯ 15 ಇದರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಉಡುಪಿ ಸಿಟಿ ಇದರ 2022 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಡಿ.22 ರಂದು ಶಾರದ ಇಂಟರ್ ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

2021 ನೇ ಸಾಲಿನ ಅಧ್ಯಕ್ಷ ಉದಯ್ ನಾಯ್ಕ್ ರವರು ನೂತನ ಅಧ್ಯಕ್ಷ ಡಾII ವಿಜಯ್ ನೆಗಳೂರಿಗೆ ಅಧಿಕಾರ ಹಸ್ತಾಂತರಿಸಿದರು.

ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ ಮಾತನಾಡಿ, ಜಗತ್ತಿನ ಅತ್ಯಂತ ದೊಡ್ಡ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೇಸಿಐ ಯು ವಿವಿಧ ದೇಶಗಳಿಗೆ ನಾಯಕ ರು ಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಈ ಸಂಸ್ಥೆಯ ಮೂಲಕ ವ್ಯಕ್ತಿತ್ವ ವಿಕಸನದೊಂದಿಗೆ ನಮ್ಮ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.

ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತಾ ಮಾತನಾಡಿ, ವಲಯದಲ್ಲಿ ವಿವಿಧ ರೀತಿಯ ವಿನೂತನ ಕಾಯ೯ಕ್ರಮಗಳು ನಡೆಯಲಿವೆ.

ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವ ಯೋಜನೆಯಿದೆ. ಇದಕ್ಕೆ ಘಟಕದ ಸಹಕಾರ ನೀಡಬೇಕೆಂದರು. ಮುಖ್ಯ ಅತಿಥಿ ಉದ್ಯಮಿ ಪ್ರಭಾಕರ ಜಿ ಮತ್ತು ಗಿರಿಜಾ ಹೆಲ್ತ್ ಕೇರ್ ನ ರವೀಂದ್ರ ಶೆಟ್ಟಿ ಯನ್ನು ಸನ್ಮಾನಿಸಲಾಯಿತು.

ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್,ಪದ ಪ್ರಧಾನ ಅಧಿಕಾರಿ ವಲಯ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ, ಕಾರ್ಯದರ್ಶಿ ಕಿರಣ್ ಭಟ್, ವೀಕ್ಷಿತ್, ನಯನ ಉದಯ್, ತನುಜಾ ಮಾಬೆನ್,ಯುವ ಜೇಸಿ ಅಧ್ಯಕ್ಷ ಸಮದುಡು ಮುಂತಾದವರಿದ್ದರು. ನೂತನ ಅಧ್ಯಕ್ಷರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸದಸ್ಯರು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply