ಜೈಂಟ್ಸ್ ಫೌಂಡೇಶನ್ ಸಂಸ್ಥಾಪಕ ದಿವಂಗತ ಶ್ರೀ ನಾನಾ ಚೂಡಾಸಮಾ ಅವರ ಜನ್ಮದಿನದ ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮ

ಜೈಂಟ್ಸ್ ಫೌಂಡೇಶನ್ ಸಂಸ್ಥಾಪಕ ದಿವಂಗತ ಶ್ರೀ ನಾನಾ ಚೂಡಾಸಮಾ ಅವರ ಜನ್ಮದಿನದ ನೆನಪಿಗಾಗಿ ಉಡುಪಿಯ ಅಜ್ಜರಕಾಡಿನ ವಿವೇಕಾನಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜೂನ್ 17 ರಂದು ಉಡುಪಿಯ ಜೈಂಟ್ಸ್ ಗ್ರೂಪ್ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜೈಂಟ್ಸ್ ಗ್ರೂಪ್ ನ ಅಧ್ಯಕ್ಷ ಉಡುಪಿ ಎಂ.ಇಕ್ಬಾಲ್ ಮನ್ನಾ, ಕೇಂದ್ರ ಸಮಿತಿ ಸದಸ್ಯ ಕೆ.ದಿನಕರ ಅಮೀನ್, ಘಟಕದ ಸಂಚಾಲಕ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರು, ನಿರ್ದೇಶಕರಾದ ಜಗದೀಶ್ ಅಮೀನ್, ಗಣೇಶ್ ಉರಾಳ್, ಶಾಲಾ ಮುಖ್ಯೋಪಾಧ್ಯಾಯರಾದ ಸದಾನಂದ್, ವಿನಯ್ ಕುಮಾರ್, ಶಾಲಾ ಶಿಕ್ಷಕರಾದ ಹೇಮಲತಾ ಶೆಟ್ಟಿ, ಶೈಲಜಾ ಜಿ.ಎನ್., ಪೂರ್ಣಿಮಾ, ಜಯಲಕ್ಷ್ಮಿ.
ಬಿ.ಸಿ., ವಿದ್ಯಾರ್ಥಿ ನಾಯಕ
ಆನಂದ್ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಶಾಲಾ ಮುಖ್ಯೋಪಾಧ್ಯಾಯ ಸದಾನಂದ ಸ್ವಾಗತಿಸಿ, ಗಣೇಶ ಉರಾಳ್ ವಂದಿಸಿದರು.

 
 
 
 
 
 
 
 
 
 
 

Leave a Reply