ವೈಜ್ಞಾನಿಕ ಕೃಷಿಯ ಬಗ್ಗೆ ಅರಿತುಕೊಂಡು ಮುನ್ನಡೆಯ ಬೇಕು~ರಾಮಕೃಷ್ಣ ಶರ್ಮ ಬಂಟಕಲ್ಲು

ಕಾಪು: ವೈಜ್ಞಾನಿಕತೆ ಯೊಂದಿಗೆ ಸಾಂಪ್ರಧಾಯಿಕತೆಯನ್ನು ಬಳಸಿಕೊಂಡು ನಡೆಸುವ ಕೃಷಿಯಿಂದ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳಬಹುದು.

ವೈಜ್ಞಾನಿಕತೆ ಎಂದರೆ ರಾಸಾಯನಿಕ ಗೊಬ್ಬರ ಬಳಕೆ, ಯಂತ್ರಗಳ ಬಳಕೆಯಲ್ಲ. ಬದಲಾಗಿಗೆ ಗಿಡಕ್ಕೆ ಏನು ಬೇಕೋ ಅದನ್ನು ನೀಡಬೇಕು. ಆ ಮೂಲಕ ವೈಜ್ಞಾನಿಕ ಕೃಷಿಯನ್ನು ಲಾಭದಾಯಕ ವನ್ನಾಗಿಕೊಳ್ಳಲು ಸಾಧ್ಯವಿದೆ.
ಅವೈಜ್ಞಾನಿಕತೆ ಮಾದರಿಯ ಕೃಷಿಯಿಂದ ನಷ್ಟದ ಜೊತೆಗೆ ಅನಾರೋಗ್ಯವನ್ನೂ ಆಹ್ವಾನಿಸಿ ಕೊಂಡಂತಾಗುತ್ತದೆ. ಕೃಷಿಕರ ಬದುಕು ಹಸನಾಗಬೇಕಾದರೆ ಕೃಷಿಯಲ್ಲಿ ಯಾವುದೇ ತಪ್ಪುಗಳನ್ನು ಮಾಡದೇ, ವೈಜ್ಞಾನಿಕ ಕೃಷಿಯ ಬಗ್ಗೆ ಅರಿತುಕೊಂಡು ಮುನ್ನಡೆಯಬೇಕು ಎಂದು ಉಡುಪಿ ಜಿಲ್ಲಾ ಕೃಷಿಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.

ಕಾಪು ಜೇಸಿಐ, ಜೇಸಿರೆಟ್ ವಿಭಾಗದ ಮಹಿಳಾ ಉತ್ಸವ್ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಕೃಷಿಯಾಸಕ್ತರ ಬಳಗವು ಇನ್ನಂಜೆಯಲ್ಲಿ ಶನಿವಾರ ಏರ್ಪಡಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮ, ನೇರ ತರಕಾರಿ ಮಾರಾಟ ಮೇಳ ಮತ್ತು ಪ್ರಗತಿಪರ ಕೃಷಿಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಪ್ರತೀ ವರ್ಷ ಸುಮಾರು 150ಕ್ಕೂ ಅಧಿಕ  ಮಾಹಿತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಕೃಷಿಯತ್ತ ಜನರನ್ನು ಸೆಳೆಯುವುದರ ಜೊತೆಗೆ, ಕೃಷಿ ಯನ್ನು ಲಾಭದಾಯಕವನ್ನಾಗಿಸುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕೃಷಿಕರನ್ನು ಆರ್ಥಿಕ ಸಬಲರನ್ನಾಗಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕಿದ್ದು ಅದಕ್ಕೆ ಸಂಘ ಸಂಸ್ಥೆಗಳ ಪೂರ್ಣ ಸಹಕಾರದ ಅಗತ್ಯತೆಯಿದೆ ಎಂದರು.ಇನ್ನಂಜೆ ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಪ್ರಗತಿಪರ ಕೃಷಿಕ ಗೋಪಾಲ ಕುಂದರ್ ಮಜೂರು ತರಕಾರಿ ಕೃಷಿ ಸಹಿತವಾಗಿ ವಿವಿಧ ವಾಣಿಜ್ಯ ಬೆಳೆಗಳನ್ನು ಹೇಗೆ ಲಾಭದಾಯಕ ವಾಗಿಸಿ ಕೊಳ್ಳಬಹುದು ಮತ್ತು ಯಾವ ಋತುಗಳಲ್ಲಿ ಯಾವ್ಯಾವ ತರಕಾರಿಗಳನ್ನು ಬೆಳೆಯ ಬಹುದು ಎನ್ನುವುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಇನ್ನಂಜೆಯ ಹಿರಿಯ ಪ್ರಗತಿಪರ ಕೃಷಿಕೆ ಮುತ್ತು ಮೂಲ್ಯದಿ ಅವರನ್ನು ಸಮ್ಮಾನಿಸಿ, ಗೌರವಿಸ ಲಾಯಿತು. ಪ್ರಗತಿಪರ ಕೃಷಿಕ ಉದಯ್ ಜಿ., ಕಾಪು ಜೇಸಿಐ ನಿಕಟಪೂರ್ವ ಅಧ್ಯಕ್ಷ ವಿನೋದ್ ಕಾಂಚನ್, ಜೇಸಿರೆಟ್ ಅಧ್ಯಕ್ಷ ಗಾಯಾತ್ರಿ ಜಿ. ಆಚಾರ್ಯ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐ ಅಧ್ಯಕ್ಷೆ ಅರುಣಾ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ರುತಿ ಎಸ್. ಶೆಟ್ಟಿ ವಂದಿಸಿದರು. 

 
 
 
 
 
 
 
 
 

Leave a Reply