ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾ ವತಿಯಿಂದ ರೂ 2.4 ಲಕ್ಷ ಹೊರೆ ಕಾಣಿಕೆ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾ ವತಿಯಿಂದ ರೂ 2.4 ಲಕ್ಷ ಹೊರೆ ಕಾಣಿಕೆ ಸಮರ್ಪಣೆ .

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಆದಾಯ ಕುಂಠಿತಗೊಂಡಿದ್ದು ಈ ಸಂದರ್ಭದಲ್ಲಿ ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ಸದಸ್ಯರು ಹೊರೆ ಕಾಣಿಕೆ ರೂಪದಲ್ಲಿ ಸ್ವಯಂ ಪ್ರೇರಣೆಯಿಂದ ನೀಡಿದ ರೂ 2.4 ಲಕ್ಷ ಮೊತ್ತದ ಚೆಕ್ ನ್ನು ಬ್ರಾಹ್ಮಣ ಸಭಾದ ಅಧ್ಯಕ್ಷ ಅಗರಿ ಭಾಸ್ಕರ ರಾವ್ ರವರು ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿ ಯವರಿಗೆ ಹಸ್ತಾಂತರಿಸಿದರು. ​​
 
ಈ ಸಂದರ್ಭದಲ್ಲಿ ಆಶೀರ್ವಚನಗೈದ ಸ್ವಾಮೀಜಿ ‘ಕೊರೋನಾ ಮಹಾ ಮಾರಿ ಆದಷ್ಟು ಬೇಗ ಕೊನೆಗೊಂಡು ಮನುಕುಲಕ್ಕೆ ಸುಖ ಶಾಂತಿ ದೊರಕಲಿ’ ಎಂದರು.ಈ ಸಂದರ್ಭದಲ್ಲಿ ವಲಯ ಬ್ರಾಹ್ಮಣ ಸಭಾದ ಸ್ಥಾಪಕಾಧ್ಯಕ್ಷ  ಪ್ರೋ ವೇಣುಗೋಪಾಲ ಮುಳ್ಳೇರಿಯಾ​,​ ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್​,​ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ವಿಷ್ಣು ಪಾಡಿಗಾರ್​,​
 
ಸಭಾದ ಪದಾಧಿಕಾರಿಗಳಾದ ರಮೇಶ್ ರಾವ್​,​ ಶ್ರೀವತ್ಸ ಆಚಾರ್ಯ​,​ ಪ್ರೋ ಮೋಹನ್ ಕಲ್ಲೂರಾಯ​,​ ಯೋಗೀಶ ಕೊಡಂಚ​,​ ಅನಂತಕೃಷ್ಣ ಕೊಡ್ಲಾಯ ​,​ಕೃಷ್ಣದಾಸ ಆಚಾರ್ಯ, ಕೃಷ್ಣ ಭಟ್​,​ ಗಿರೀಶ್ ರಾವ್ಕೃಷ್ಣಮೂರ್ತಿ ಬುಧ್ಯ​,​ ಜಲಜಾಕ್ಷಿ ಬಿ, ಗೀತಾ ಆರ್, ವಸುಧಾ ಜಿ ಮುಂತಾದವರು ಉಪಸ್ಥಿತರಿದ್ದರು.​​
 
 
 
 
 
 
 
 
 
 
 

Leave a Reply