ಹೆರ್ಗ: ಚೈಲ್ಡ್ ಲೈನ್ ಗೆ ಕರೆಬಂದ ಹಿನ್ನೆಲೆ ರೋಟರಿ ಉಡುಪಿಯ ಸಹಯೋಗದೊಂದಿಗೆ ಬಡ ಕುಟುಂಬಕ್ಕೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲಾಯಿತು.
ಬಡ ಕುಟುಂಬದ ಯಜಮಾನ ಅಪಘಾತದಿಂದಾಗಿ ಹಾಸಿಗೆಯಲ್ಲಿದ್ದು ಅವನ ಹೆಂಡತಿಗೆ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲವಿದ್ದು ಪ್ರಾಯದ ಅತ್ತೆ ಮತ್ತು ಒಬ್ಬಳು ಮಗಳೊಂದಿಗೆ ಜೀವನ ನಿರ್ವಹಣೆ ಕಷ್ಟವೆಂದು ಚೈಲ್ಡ್ ಲೈನ್ ಗೆ ಕರೆ ಬಂದ ಹಿನ್ನಲೆಯಲ್ಲಿ ಸಹಾಯ ಮಾಡಲಾಗಿದೆ.
ರೋಟರಿ ಅದ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ,ಕಾರ್ಯದರ್ಶಿ ರೋ.ದೀಪಾ ಭಂಡಾರಿ, ರೋ.ಬಿ.ವಿ.ಲಕ್ಷ್ಮೀ ನಾರಾಯಣ, ರೋದಿನೇಶ್ ಭಂಡಾರಿ, ರೋ.ಗುರುರಾಜ ಭಟ್, ಚೈಲ್ಡ್ ಲೈನ್ ಉಡುಪಿ ಯ ನಿರ್ದೇಶಕ ರೋ.ರಾಮಚಂದ್ರ ಉಪಾಧ್ಯಾಯ, ಚೈಲ್ಡ್ ಲೈನ್ ನ ಕು.ಕಸ್ತೂರಿ,ತ್ರಿವೇಣಿ ಮತ್ತಿತರು ಉಪಸ್ಥಿತರಿದ್ದರು.