ವರ್ಗಾವಣೆಗೊಂಡ ಬ್ರಹ್ಮಾವರ ತಹಶೀಲ್ದಾರ್ ಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಕಿರಣ್ ಗೋರಯ್ಯ ಬ್ರಹ್ಮಾವರದಿಂದ ವರ್ಗಾವಣೆಗೊಂಡಿದ್ದು ಅವರ ಸೇವೆಯನ್ನು ಸ್ಮರಿಸಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಇಂದು ಸಮ್ಮಾನಿಸಿ ಗೌರವಿಸಲಾಯಿತು.

ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಮಾತನಾಡಿ, ಕಿರಣ್ ಗೋರಯ್ಯ ಅವರು ಅತ್ಯಂತ ಜನಸ್ನೇಹಿಯಾಗಿ ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಪತ್ರಕರ್ತರ ಜತೆ ಆತ್ಮೀಯ ಸಂಬಂಧ ಇರಿಸಿಕೊಂಡಿದ್ದರು. ನಮ್ಮ ಸಂಘಕ್ಕೆ ಬ್ರಹ್ಮಾವರದಲ್ಲಿ ನಿವೇಶನವೊಂದನ್ನು ಕಾಯ್ದಿಸುವ ಸಲುವಾಗಿ ಸ್ಥಳಗುರುತಿಸುವಿಕೆ, ಕಡತಗಳ ರವಾನೆಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬ್ರಹ್ಮಾವರ ಪತ್ರಕರ್ತರ ಸಂಘದ ಇತಿಹಾಸದಲ್ಲೇ ವರ್ಗಾವಣೆಗೊಂಡ ಅಧಿಕಾರಿಯನ್ನು ಗೌರವಿಸುತ್ತಿರುವುದು ಇದೇ ಪ್ರಥಮವಾಗಿದ್ದು ಗೋರಯ್ಯರ ಕಾರ್ಯಧಕ್ಷತೆಯನ್ನು ಇದು ಸೂಚಿಸುತ್ತದೆ ಎಂದರು.

ಈ ವೇಳೆ ನೂತನವಾಗಿ ಅಧಿಕಾರವಹಿಸಿಕೊಂಡ ತಹಶೀಲ್ದಾರ್ ರಾಜಶೇಖರ್‌ಮೂರ್ತಿಗೆ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗೌರವ ಸ್ವೀಕರಿಸಿದ ಕಿರಣ್ ಗೋರಯ್ಯ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

ಪತ್ರಕರ್ತರ ಸಂಘದ ಖಜಾಂಚಿ ಮೋಹನ್ ಉಡುಪ, ಪದಾಧಿಕಾರಿಗಳಾದ ಚಂದ್ರಶೇಖರ್ ಬೀಜಾಡಿ, ಪ್ರವೀಣ್ ಮುದ್ದೂರು, ಬಂಡೀಮಠ ಶಿವರಾಮ್ ಆಚಾರ್ಯ,ರವೀಂದ್ರ ಕೋಟ, ಪ್ರವೀಣ್ ಬ್ರಹ್ಮಾವರ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗಣೇಶ್ ಸಾಹೇಬ್ರಕಟ್ಟೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಪ್ರಭಾರ ಕಾರ್ಯದರ್ಶಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply