ಸರಕಾರಿ ಪಾಲಿಟೆಕ್ನಿಕ್, ಮಣಿಪಾಲ- ರಕ್ತದಾನ ಶಿಬಿರ

ದಿನಾಂಕ 10-6-2022ನೇ ಶುಕ್ರವಾರ, ಸರಕಾರಿ ಪಾಲಿಟೆಕ್ನಿಕ್, ಅನಂತನಗರ ಮಣಿಪಾಲ ಇದರ ಏನ್ ಎಸ್ ಎಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕ, ರೋಟರಿ ಉಡುಪಿ ಮತ್ತು ಬ್ಲಡ್ ಬ್ಯಾಂಕ್, ಕೆಏಂಸಿ ಮಣಿಪಾಲ ಇವು ಮೂರರ ಸಹಯೋಗದಲ್ಲಿ ರಕ್ತದಾನ ಶಿಬಿರ ವನ್ನು ಸರಕಾರಿ ಪಾಲಿಟೆಕ್ನಿಕ್, ಮಣಿಪಾಲ ಇಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ರೋಟರಿ ಉಡುಪಿಯ ಹ್ಯಾಪಿ ಸ್ಕೂಲ್ ಯೋಜನೆ ಯಂತೆ ಪಾಲಿಟೆಕ್ನಿಕ್ ನ ಕಂಫೂಟರ್ ವಿಬಾಗಕ್ಕೆ ನೀಡಲಾದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಮೌಲ್ಯ ದ ಕಂಪ್ಯೂಟರ್ ಟೇಬಲ್ ನ ಹಸ್ತಾಂತರ ಕಾರ್ಯಕ್ರಮ ವು ನಡೆಯಿತು. ಎರಡೂ ಕಾರ್ಯಕ್ರಮ ಗಳ ಉದ್ಘಾಟಕರಾಗಿ ನಿಕಟ ಪೂರ್ವ ರೋಟರಿ ಜಿಲ್ಲಾ ಗವರ್ನರ್ ರೋ.ರಾಜರಾಮ ಭಟ್, ಹ್ಯಾಪಿ ಸ್ಕೂಲ್‌ ನ ಜಿಲ್ಲಾ ಸಭಾಪತಿ ರೋ.ಕರುಣಾಕರ ಶೆಟ್ಟಿ, ಸಹಾಯಕ ಗವರ್ನರ್ ರೋ.ಡಾ.ಸುರೇಶ್ ಶೆಣೈ, ರೋಟರಿ ಉಡುಪಿ ಅಧ್ಯಕ್ಷ ರೋ. ಹೇಮಂತ್ ಯು. ಕಾಂತ್, ಕಾರ್ಯದರ್ಶಿ ರೋ. ಗೋಪಾಲಕೃಷ್ಣ ಪ್ರಭು, ಸಮುದಾಯ ಸೇವಾ ನಿರ್ದೇಶಕ ರೋ.ರಾಮಚಂದ್ರ ಉಪಾಧ್ಯಾಯ, ಬ್ಲಡ್ ಬ್ಯಾಂಕ್ ನ ಡಾ. ದೀಪಿಕಾ ಹಾಗೂ ಡಾ.ಅಶ್ನಾ, ಪಾಲಿಟೆಕ್ನಿಕ್ ನಪ್ರಭಾರ ಪ್ರಾಂಶುಪಾಲ ಶ್ರೀ ಮತಿ ಪುಷ್ಪ, ಎನ್ನೆಸ್ ಎಸ್ ಸಂಯೋಜನಾಧಿಕಾರಿ ಶ್ರೀ ಶಶಿಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀ ಕುಮಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಅಧ್ಯಕ್ಷ ರೋ.ಹೇಮಂತ ಯು ಕಾಂತ ಸ್ವಾಗತಿಸಿದರು. ಉಪನ್ಯಾಸಕ ಶ್ರೀ ಸುನಿಲ್ ಕುಮಾರ್ ರವರು ವಂದನಾರ್ಪಣೆ ಗೈದರು. ಉಪನ್ಯಾಸಕಿ ಶ್ರೀಮತಿ ವಂದನಾರವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮ ದಲ್ಲಿ ಒಟ್ಟು 50 ಯುನಿಟ್ ರಕ್ತ ಸಂಗ್ರಹ ವಾಯಿತು.

 
 
 
 
 
 
 
 
 
 
 

Leave a Reply